ಕಣ್ಮನ ಸೆಳೆದ ಗಣರಾಜ್ಯೋತ್ಸವ ಸಂಭ್ರಮ...

Update: 2019-01-26 17:58 GMT

ಭಾರತವು ಶನಿವಾರ ದಿಲ್ಲಿಯ ರಾಜಪಥ್‌ನಲ್ಲಿ ಭವ್ಯ ಮಿಲಿಟರಿ ಪರೇಡ್, ತನ್ನ ಇತಿಹಾಸ, ಸಾಂಸ್ಕೃತಿಕ ವೈವಿಧ್ಯ ಮತ್ತು ವ್ಯೆಹಾತ್ಮಕ ಶಸ್ತ್ರಾಸ್ತ್ರಗಳ ಪ್ರದರ್ಶನದೊಂದಿಗೆ 70ನೇ ಗಣರಾಜ್ಯೋತ್ಸವವನ್ನು ಸಂಭ್ರಮದೊಂದಿಗೆ ಆಚರಿಸಿತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 16 ಹಾಗೂ ಕೇಂದ್ರ ಸರಕಾರದ ಸಚಿವಾಲಯಗಳು ಮತ್ತು ಇಲಾಖೆಗಳ ಆರು ಸ್ತಬ್ಧಚಿತ್ರಗಳು ಸೇರಿದಂತೆ ಒಟ್ಟು 22 ಸ್ತಬ್ಧಚಿತ್ರಗಳು ಸಾಂಸ್ಕೃತಿಕ ಪರೇಡ್‌ನಲ್ಲಿ ಪಾಲ್ಗೊಂಡಿದ್ದವು. ಇವು ಒಟ್ಟಾರೆಯಾಗಿ ಮಹಾತ್ಮಾ ಗಾಂಧೀಜಿಯವರ ಜೀವನ ಮತ್ತು ಆದರ್ಶಗಳನ್ನು ಬಿಂಬಿಸಿದ್ದವು. ವಿದೇಶಿ ಗಣ್ಯರು ಮತ್ತು ದೇಶದ ಅತ್ಯುನ್ನತ ರಾಜಕೀಯ ನಾಯಕರು ಹಾಗೂ ಮಿಲಿಟರಿ ಅಧಿಕಾರಿಗಳು ಸೇರಿದಂತೆ ಸಾವಿರಾರು ಜನರು ಈ ದೃಶ್ಯವೈಭವಗಳನ್ನು ಕಣ್ತುಂಬಿಸಿಕೊಂಡರು. ಪರೇಡ್‌ನಲ್ಲಿ ಕರ್ನಾಟಕದಿಂದ ‘ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ ಭಾಗವಹಿಸಿದ್ದ ವೇದಿಕೆ’ಯ ಸ್ತಬ್ದಚಿತ್ರ ಕಣ್ಮನ ಸೆಳೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor