ಭರವಸೆ ಈಡೇರಿಸದ ರಾಜಕೀಯ ನಾಯಕರಿಗೆ ಜನರು ಥಳಿಸುತ್ತಾರೆ: ಮೋದಿಯನ್ನು ಕುಟುಕಿದರೇ ನಿತಿನ್ ಗಡ್ಕರಿ?

Update: 2019-01-27 16:39 GMT

#ನಾನು ಕನಸುಗಳನ್ನು ಮಾತ್ರ ಮಾರುವ ವ್ಯಕ್ತಿಯಲ್ಲ ಎಂದ ಕೇಂದ್ರ ಸಚಿವ

ಮುಂಬೈ, ಜ.27: ಜನರಿಗೆ ಕನಸುಗಳನ್ನು ಮಾರಿ, ಅದನ್ನು ಈಡೇರಿಸದ ರಾಜಕೀಯ ನಾಯಕರಿಗೆ ಸಾರ್ವಜನಿಕರು ಥಳಿಸುತ್ತಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಗಡ್ಕರಿಯವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

“ಕನಸುಗಳನ್ನು ಮಾರುವ ರಾಜಕೀಯ ನಾಯಕರು, ಅವುಗಳನ್ನು ಈಡೇರಿಸಲು ವಿಫಲರಾಗುತ್ತಾರೆ. ಅವರಿಗೆ ಸಾರ್ವಜನಿಕರೇ ಥಳಿಸುತ್ತಾರೆ. ನಾನು ಕನಸುಗಳನ್ನು ಮಾತ್ರ ಮಾರುವ ವ್ಯಕ್ತಿಯಲ್ಲ, ನಾನು ಮಾತನಾಡುವ ಕೆಲಸವನ್ನು 100 ಶೇ. ಮಾಡುತ್ತೇನೆ” ಎಂದವರು ಹೇಳಿದರು.

ಗಡ್ಕರಿ ಹೇಳಿಕೆ ಬಗ್ಗೆ ಟ್ವೀಟ್ ಮಾಡಿರುವ ಅಸಾದುದ್ದೀನ್ ಒವೈಸಿ, “ಪ್ರಧಾನಿಯವರೇ… ನಿತಿನ್ ಗಡ್ಕರಿ ನಿಮಗೆ ಕನ್ನಡಿಯನ್ನು ತೋರಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

“ಪ್ರಧಾನಿ ಮೋದಿ ವಿರುದ್ಧ ನಿತಿನ್ ಗಡ್ಕರಿ ವಾಗ್ದಾಳಿ ನಡೆಸಿದ್ದಾರೆ… ಮೋದಿ ಜೀ… ಜನರು ಬರುತ್ತಿದ್ದಾರೆ” ಎಂದು ಮಧ್ಯಪ್ರದೇಶ ಕಾಂಗ್ರೆಸ್ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News