ಕ್ಷೇತ್ರಕ್ಕೆ ಬಿಡುಗಡೆಯಾಗಿರುವುದು ಸರ್ಕಾರದ ಅನುದಾನ, ಯಾರದೋ ಮನೆ ದುಡ್ಡಲ್ಲ: ಶಾಸಕ ಎನ್.ಮಹೇಶ್

Update: 2019-01-30 12:05 GMT

ಕೊಳ್ಳೇಗಾಲ,ಜ.30: ಕೊಳ್ಳೇಗಾಲ ಕ್ಷೇತ್ರಕ್ಕೆ ಬಿಡುಗಡೆಯಾಗಿರುವುದು ಸರ್ಕಾರದ ಅನುದಾನವೇ ಹೊರತು ಯಾರದೋ ಅಪ್ಪನ ಮನೆ ದುಡ್ಡಲ್ಲ ಎಂದು ಶಾಸಕ ಎನ್.ಮಹೇಶ್ ಅವರು ತೀರುಗೇಟು ನೀಡಿದರು. 

ಕೊಳ್ಳೇಗಾಲ ಪಟ್ಟಣದಲ್ಲಿ 7 ಕೋಟಿ 26 ಲಕ್ಷದ ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ನಂತರ ಸುದ್ದಿಗಾರರೋದಿಗೆ ಮಾತನಾಡಿದ ಅವರು ಮಾಜಿ ಶಾಸಕ ಜಯಣ್ಣ ಅವರು ನಾನು ಭೂಮಿ ಪೂಜೆ ಮಾಡಿದ ಕಾಮಾಗಾರಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇದರಲ್ಲಿ ಕಳಪೆ ಕಾಮಗಾರಿಗಳು ಕಂಡು ಬಂದರೆ ಅದನ್ನು ಮಾಜಿ ಶಾಸಕ ಜಯಣ್ಣ ಅವರು ಪರಿಶೀಲನೆ ಮಾಡಿಕೊಳ್ಳಲಿ ಎಂದು ಹೇಳಿದರು.

ಕ್ಷೇತ್ರಕ್ಕೆ ಒಂದು ರೂಪಾಯಿ ಆಗಲಿ ಒಂದು ಕೋಟಿ ಆಗಲಿ ಆಯಾ ಕ್ಷೇತ್ರದ ಶಾಸಕರು ಮಾತ್ರ ಅನುದಾನ ತರುತ್ತಾರೆ ಹೊರತು ಬೇರೆಯವರಲ್ಲ ಎಂದು ತೀರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News