"ಕುಮಾರಸ್ವಾಮಿ ಅಂತಹ ನಾಚಿಕೆ, ಮರ್ಯಾದೆಗೆಟ್ಟ ಮುಖ್ಯಮಂತ್ರಿಯನ್ನು ಈ ರಾಜ್ಯ ನೋಡಿಲ್ಲ"

Update: 2019-02-03 16:32 GMT

ದಾವಣಗೆರೆ,ಫೆ.3: ಕುಮಾರಸ್ವಾಮಿ ಅಂತಹ ನಾಚಿಕೆ, ಮಾನ, ಮರ್ಯಾದೆಗೆಟ್ಟ ಮುಖ್ಯಮಂತ್ರಿಯನ್ನು ಈ ರಾಜ್ಯ ನೋಡಿಲ್ಲ. ಕುತ್ತಿಗೆ ಹಿಡಿದು ನೂಕಿದರೂ ಸಹ ಕುಮಾರಸ್ವಾಮಿ ಸಿಎಂ ಹುದ್ದೆ ಬಿಟ್ಟು ಹೋಗಲ್ಲ. ಬೂಟಾಟಿಕೆಗೆ ಹೇಳಿಕೆ ನೀಡುತ್ತಾರೆ ಅಷ್ಟೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ನಡೆಸಿ ಇಲ್ಲದಿದ್ರೆ ರಾಜೀನಾಮೆ ನೀಡಿ ಮನೆಗೆ ಹೋಗಿ. ಬರೀ ಹೇಳಿಕೆಯಿಂದ ಏನೂ ಆಗಲ್ಲ. ಕಾಂಗ್ರೆಸ್ ನವರು ಅಧಿಕಾರ ಕಳೆದುಕೊಂಡ ಮೇಲೆ ದಿಕ್ಕೆಟ್ಟು ಹೋಗಿದ್ದಾರೆ. ಸಿಎಂ ಕುಮಾರಸ್ವಾಮಿ ಬಿಜೆಪಿ ಶಾಸಕ ಸುಭಾಷ್ ಗುತ್ತೆದಾರಗೆ ಹಣ ಕೊಡಲು ಮುಂದೆ ಬಂದಿದ್ದರು. ಬಿಜೆಪಿ ಆಪರೇಷನ್ ಕಮಲ ಮಾಡುತ್ತಿದೆ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಅದು ಸಂಪೂರ್ಣ ಸುಳ್ಳು ಎಂದು ಹೇಳಿದರು.

ದಿನೇಶ್ ಗುಂಡೂರಾವ್ ಒಬ್ಬ ಪೇಪರ್ ಟೈಗರ್. ಶಾಸಕ ಸೋಮಶೇಖರ್ ಗೆ ನೋಟಿಸ್ ಕೊಟ್ಟರು. ಉತ್ತರ ಬಂದ ಬಳಿಕ ಅದು ಸರಿ ಅಂದರು. ಹೀಗೆಯೇ ಜನ ಸಿದ್ದರಾಮಯ್ಯ ಬಳಸುವ ಭಾಷೆ ಹಾಗೂ ಸಿಎಂ ವರ್ತನೆಯನ್ನು ಗಮನಿಸುತ್ತಿದ್ದಾರೆ. ನಿಮ್ಮ ಶಾಸಕರನ್ನು ನೀವು ವಿಶ್ವಾಸದಲ್ಲಿ ಇಟ್ಟುಕೊಳ್ಳಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News