ನಲ್ಲೂರು : ಹುಲ್ಲಿನ ಕಂತೆಗಳು ಬೆಂಕಿಗಾಹುತಿ

Update: 2019-02-05 13:49 GMT

ಮಡಿಕೇರಿ, ಫೆ.5 :ಆಕಸ್ಮಿಕ ಬೆಂಕಿ ತಗುಲಿ ಸುಮಾರು 5 ಸಾವಿರ ಹುಲ್ಲಿನ ಕಂತೆಗಳು ಬೆಂಕಿಗಾಹುತಿಯಾಗಿರುವ ಘಟನೆ ನಲ್ಲೂರು ಗ್ರಾಮದ ಸಮೀಪ ಹೊನ್ನಿಕೊಪ್ಪಲು ಎಂಬಲ್ಲಿ ನಡೆದಿದೆ.

ಗ್ರಾಮದ ರೈತ ಹೆಚ್.ಎಂ.ಪುಟ್ಟಪ್ಪ ಅವರಿಗೆ  ಸೇರಿದ ಹುಲ್ಲಿನ ಮೆದೆ ಸಂಪೂರ್ಣವಾಗಿ ಬೆಂಕಿಯಲ್ಲಿ ಬೆಂದು ಹೋಗಿದೆ.  ಇದರಿಂದಾಗಿ ಸುಮಾರು 50 ಸಾವಿರ ನಷ್ಟವಾಗಿದೆ ಎಂದು ಪುಟ್ಟಪ್ಪ ತಿಳಿಸಿದ್ದಾರೆ.

ಮಧ್ಯಾಹ್ನದ ವೇಳೆಗೆ ಪುಟ್ಟಪ್ಪ ಕಣದಲ್ಲಿ ಜೋಡಿಸಿಟ್ಟಿದ್ದ ಹುಲ್ಲಿನ ಮೆದೆಗೆ ಬೆಂಕಿ ತಗುಲಿದೆ. ಈ ಸಂದರ್ಭ ರೈತ ಸಂಘದ ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್ ಅವರು ಸ್ಥಳೀಯರ ಸಹಕಾರದಲ್ಲಿ ಸಮೀಪದ ಹೊಳೆಯಿಂದ ಪೈಪ್ ಲೈನ್ ಮೂಲಕ ನೀರು ಹಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News