×
Ad

ಶಿರಸಿ: ಆಕಸ್ಮಿಕವಾಗಿ ಬಂದೂಕಿನಿಂದ ಸಿಡಿದ ಗುಂಡು; ಬಾಲಕ ಮೃತ್ಯು

Update: 2019-02-05 23:38 IST

ಶಿರಸಿ ಫೆ.5 : ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿ ಬಾಲಕನೋರ್ವ ಸಾವನ್ನಪ್ಪಿದ ಘಟನೆ  ತಾಲೂಕಿನ ವಾನಳ್ಳಿ ಕೆರೆಗದ್ದೆಯಲ್ಲಿ ನಡೆದಿದೆ. ಕಾರ್ತಿಕ ಹೆಗಡೆ (17) ಮೃತಪಟ್ಟ ಬಾಲಕ.

ತೋಟಕ್ಕೆ ಮಂಗಗಳು ದಾಳಿ ಇಟ್ಟಿದ್ದರಿಂದ ಅವುಗಳನ್ನು ಓಡಿಸಲು ಬಂದೂಕಿಗೆ ಗುಂಡು ತುಂಬುವಾಗ ಆಕಸ್ಮಿಕವಾಗಿ ಗುಂಡು ಬಾಲಕನ ತಲೆಗೆ ತಗುಲಿ ಸ್ಥಳದಲ್ಲಿಯೇ ಬಾಲಕ ಮೃತಪಟ್ಟಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ಬಂದಿದ್ದು, ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News