ಟಿಲ್ಲರ್ ನಲ್ಲಿ ಆಕ್ಸಿಜನ್ ಸಿಲಿಂಡರ್ ಸಾಗಿಸುತ್ತಿದ್ದಾಗ ಅವಘಡ: ಕಾರ್ಮಿಕ ಸಾವು

Update: 2019-02-06 17:25 GMT

ಶಿವಮೊಗ್ಗ, ಫೆ. 6: ಆಕ್ಸಿಜನ್ ಸಿಲಿಂಡರ್ ಸಾಗಾಣೆ ಮಾಡುತ್ತಿದ್ದ ಟಿಲ್ಲರ್ ನ ಚಾಲಕ ಅಜಾಗರೂಕತೆಯಿಂದ ವಾಹನದ ಬ್ರೇಕ್ ಹಾಕಿದ ಕಾರಣದಿಂದ, ಸಿಲಿಂಡರ್ ಬಡಿದು ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಭದ್ರಾವತಿ ಪಟ್ಟಣದ ಇಂಡಸ್ಟ್ರಿಯಲ್ ಏರಿಯಾ ರಸ್ತೆಯಲ್ಲಿ ನಡೆದಿದೆ.

ಸುರೇಶ್ ಮೃತಪಟ್ಟ ಕಾರ್ಮಿಕನೆಂದು ಗುರುತಿಸಲಾಗಿದೆ. ಮೃತ ಸುರೇಶ್ ಸೇರಿದಂತೆ ಮೂರ್ನಾಲ್ಕು ಕಾರ್ಮಿಕರು ಟಿಲ್ಲರ್ ನಲ್ಲಿ ಆಕ್ಸಿಜನ್ ಸಿಲಿಂಡರ್ ಕೊಂಡೊಯ್ಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಗಾಯಾಳು ಸುರೇಶ್‍ರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಈ ಸಂಬಂಧ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News