ನನಗೆ ಬಿಜೆಪಿ ನಾಯಕರು 30 ಕೋಟಿ ರೂ. ಆಮಿಷ ಒಡ್ಡಿದ್ದಾರೆ: ಶಾಸಕ ಶ್ರೀನಿವಾಸಗೌಡ ಆರೋಪ

Update: 2019-02-10 10:27 GMT

ಕೋಲಾರ, ಫೆ. 10: ಬಿಜೆಪಿ ನಾಯಕರು ನನಗೆ 30 ಕೋಟಿ ರೂ. ಆಮಿಷ ಒಡ್ಡಿದ್ದಾರೆ ಎಂದು ಕೋಲಾರ ಶಾಸಕ ಕೆ. ಶ್ರೀನಿವಾಸಗೌಡ ತಿಳಿಸಿದ್ದಾರೆ.

ಕೋಲಾರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಬಿಜೆಪಿ ಶಾಸಕರಾದ ಯೋಗೇಶ್ವರ್, ಅಶ್ವಥ್ ನಾರಾಯಣ 5 ಕೋಟಿ ರೂ. ಬೆಂಗಳೂರು ನಿವಾಸದಲ್ಲಿ ಬಲವಂತವಾಗಿ ಇಟ್ಟು ಹೋದರು. ಇನ್ನು 25 ಕೋಟಿ ನೀಡುವುದಾಗಿ ಹೇಳಿ ರಾಜೀನಾಮೆಗೆ ಒತ್ತಾಯಿಸಿದರು ಎಂದು ಶ್ರೀನಿವಾಸ ಗೌಡ ತಿಳಿಸಿದ್ದಾರೆ.

ಎರಡು ತಿಂಗಳು 5 ಕೋಟಿ ರೂ. ಬೆಂಗಳೂರು ನಿವಾಸದಲ್ಲೇ ಇತ್ತು. ಕೊನೆಗೆ ಪೊಲೀಸರಿಗೆ ದೂರು ನೀಡುವ ಮುನ್ನ ಮುಖ್ಯಮಂತ್ರಿಗಳ ಗಮನಕ್ಕೆ ತಂದೆ, ಆನಂತರ ಬಿಜೆಪಿಯ ಆರ್. ಅಶೋಕ್ ಅವರ ಕೈಗೆ ವಾಪಸ್ಸು ಕೊಟ್ಟು ಕಳುಹಿಸಿದೆ ಎಂದು ಶಾಸಕರು ವಿವರಿಸಿದ್ದಾರೆ.

ಬಿಜೆಪಿಯ ಡಾ. ಅಶ್ವತ್ಥ ನಾರಾಯಣ, ಯೋಗೀಶ್ವರ್ ಮತ್ತು ವಿಶ್ವನಾಥ ನೇರ ಆಮಿಷ ಒಡ್ಡಿದ್ದು, ಅವರು ಜೆಡಿಎಸ್ ಗೆ ರಾಜೀನಾಮೆ ಕೊಡುವುದಕ್ಕೆ ಒತ್ತಾಯಿಸಿದ್ದರು ಮತ್ತು ಉಸ್ತುವಾರಿ ಸಚಿವ ಸ್ಥಾನದ ಆಮಿಷವೂ ನೀಡಿದ್ದರು ಎಂದು ಶಾಸಕ ಕೆ. ಶ್ರೀನಿವಾಸಗೌಡ ಮಾಹಿತಿ ನೀಡಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News