ಪ್ರೀತಿಸಿ ಮದುವೆಯಾದ ಮರುದಿನವೇ ವರದಕ್ಷಿಣೆಗಾಗಿ ತವರಿಗೆ ಅಟ್ಟಿದ ಪತಿ: ದೂರು ದಾಖಲು

Update: 2019-02-10 14:55 GMT
ಸಾಂದರ್ಭಿಕ ಚಿತ್ರ

ಮೈಸೂರು,ಫೆ.10: ಯುವತಿಯನ್ನ ಪ್ರೀತಿಸಿ ವಿವಾಹವಾದ ಯುವಕನೋರ್ವ ಒಂದೇ ದಿನದಲ್ಲಿ ಆಕೆಯನ್ನು ವರದಕ್ಷಿಣೆ ತರುವಂತೆ ಮನೆಯಿಂದ ಹೊರ ಅಟ್ಟಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

ಮನೋಜ್ ಹಾಗೂ ಯುವತಿ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಪೋಷಕರು ಇವರಿಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಫೆ.7 ರಂದು ರಿಜಿಸ್ಟರ್ ಮದುವೆಯಾಗಿದ್ದರು. ಆದರೆ ಮರುದಿನವೇ ವರಸೆ ಬದಲಾಯಿಸಿದ ಮನೋಜ್, ನಾನು ನಿನ್ನನ್ನು ಸುಮ್ಮನೆ ಮದುವೆಯಾಗಿದ್ದೀನಿ. ಸಂಸಾರ ಮಾಡಬೇಕಾದರೆ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಯುವತಿಯನ್ನು ಮನೆಯಿಂದ ಹೊರಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಮನೋಜ್ ವಿರುದ್ಧ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದಾಗ, ಯುವಕನನ್ನು ಕರೆಸಿ ಪೊಲಿಸರು ಬುದ್ಧಿ ಹೇಳಿ ಕಳಿಸಿದ್ದರು ಎನ್ನಲಾಗಿದ್ದು, ಆದರೆ ಇದಕ್ಕೂ ಬಗ್ಗದ ಈತ ವರದಕ್ಷಿಣೆ ತೆಗೆದುಕೊಂಡು ಮನೆಗೆ ಬಾ, ಇಲ್ಲವಾದರೆ ಬೇರೆ ದಾರಿ ನೋಡಿಕೊ ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News