ಬೈಕ್ ಅಪಘಾತದ ಗಾಯಾಳು ಮೃತ್ಯು

Update: 2019-02-12 17:18 GMT

ಮದ್ದೂರು,ಫೆ.12: ಸಮೀಪದ ಶಿವಪುರ ಶಿಂಷಾ ಸೇತುವೆ ಬಳಿ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸಿದೆ ಮೃತಪಟ್ಟಿದ್ದಾನೆ.

ಕೋಡಿಹಳ್ಳಿ ಗ್ರಾಮದ ಹೊನ್ನೇಗೌಡರ ಮಗ ಸುವಾಶ್ (24) ಮೃತ ವ್ಯಕ್ತಿ. ಮದ್ದೂರಿನಿಂದ ಚನ್ನಪಟ್ಟಣಕ್ಕೆ ಮೂವರು ಒಂದೇ ಬೈಕ್‍ನಲ್ಲಿ ಹೋಗುತ್ತಿದ್ದಾಗ ಆಯತಪ್ಪಿ ಬಿದ್ದು ಈ ಘಟನೆ ನಡೆದಿತ್ತು. ಹುಣಸೇಮರದೊಡ್ಡಿ ಗ್ರಾಮದ ಸುಮಂತ್ ಹಾಗೂ ಸಾಗರ್ ತೀವ್ರವಾಗಿ ಗಾಯಗೊಂಡಿದ್ದು, ಬೆಂಗಳೂರು ಮತ್ತು ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪಟ್ಟಣದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News