ಜೀವನದಲ್ಲಿ ಜಿಗುಪ್ಸೆ: ಮುಖ್ಯ ಶಿಕ್ಷಕ ನೇಣಿಗೆ ಶರಣು

Update: 2019-02-12 18:12 GMT

ಕೊಳ್ಳೇಗಾಲ,ಫೆ.12: ಜೀವನದಲ್ಲಿ ಜಿಗುಪ್ಸೆಗೊಂಡು ಮುಖ್ಯ ಶಿಕ್ಷಕ ನೇಣಿಗೆ ಶರಣಾಗಿರುವ ಘಟನೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟಣದ ದೊಡ್ಡನಾಯಕರ ಬೀದಿಯ ನಿವಾಸಿ ಶ್ರೀಕಂಠ(45) ನೇಣಿಗೆ ಶರಣಾಗಿರುವ ವ್ಯಕ್ತಿ. ಪಟ್ಟಣದ ಮೋಳೆ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಹೊರವಲಯದ ಹಂಪಾಪುರ ರೇಷ್ಮೆ ಕಾರ್ಖಾನೆ ಎದುರುಗಡೆ ಇರುವ ಯುಜಿಡಿ ವೆಟ್‍ವೆಲ್ ಸಮೀಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶ್ರೀಕಂಠ ಪತ್ನಿ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಸಿಪಿಐ ಶ್ರೀಕಾಂತ್ ಹಾಗೂ ಪಿಎಸ್‍ಐ ವೀಣಾನಾಯಕ್ ಭೇಟಿ ನೀಡಿ ಮಹಜರು ನಡೆಸಿ ನಂತರ ಶವವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News