ಪ್ರೀತಿಸಿ ಕೈಕೊಟ್ಟ ಯುವಕ: ಆತ್ಮಹತ್ಯೆಗೆ ಶರಣಾದ ದಲಿತ ಯುವತಿ

Update: 2019-02-13 18:27 GMT

ಮೈಸೂರು,ಫೆ.13: ದಲಿತ ಯುವತಿಯೋರ್ವಳು ಯುವಕನ ಪ್ರೇಮದ ಬಲೆಗೆ ಬಿದ್ದು ಮೋಸ ಹೋಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.

ಕಟ್ಟೆಮಳಲವಾಡಿ ಗ್ರಾಮದ ನಿವಾಸಿ ಅರ್ಪಿತ ಎಂಬಾಕೆ ಆತ್ಮಹತ್ಯೆಗೆ ಶರಣಾದವಳು. ಈಕೆ ಹಣಸೂರು ಪಟ್ಟಣದ ಸ್ಟೋರ್ ಬೀದಿ ನಿವಾಸಿ ಲೋಕೇಶ್ ಗೌಡ ಎಂಬಾತನನ್ನು ಪ್ರೀತಿಸುತ್ತಿದ್ದಳು. ಜೊತೆಗೆ ದೇವಸ್ಥಾನದಲ್ಲಿ ವಿವಾಹವನ್ನೂ ಆಗಿದ್ದಳು. ಆದರೆ ಆತ ಆಕೆಯನ್ನು ಪ್ರೀತಿಸುವಂತೆ ನಾಟಕವಾಡಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ.

'ನಿನ್ನನ್ನು ವಿವಾಹವಾಗುವುದು ನನ್ನ ಮನೆಯವರಿಗೆ ಇಷ್ಟವಿಲ್ಲ. ನಾನು ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದ ಎಂದು ಅಕೆ ಡೆತ್ ನೋಟ್ ನಲ್ಲಿ ಬರೆದಿದ್ದಾಳೆ ಎನ್ನಲಾಗಿದ್ದು, ಪಟ್ಟಣದ ಸ್ಟೋರ್ ಬೀದಿ ನಿವಾಸಿ ಲೋಕೇಶ್ ಗೌಡ ಎಂಬಾತ ನನ್ನನ್ನು ನಂಬಿಸಿ ತನಗೆ ಬೇಕಾದ ರೀತಿಯಲ್ಲಿ ದೈಹಿಕವಾಗಿ ಉಪಯೋಗಿಸಿಕೊಂಡು ಮೋಸಮಾಡಿರುವುದೇ ನನ್ನ ಸಾವಿಗೆ ಕಾರಣ. ನನಗಾದ ಅನ್ಯಾಯ ಬೇರೆ ಯಾವ ಹುಡುಗಿಯರಿಗೂ ಆಗಬಾರದು. ಮುಗ್ಧ ಹೆಣ್ಣುಮಕ್ಕಳು ಈತನಿಗೆ ಬಲಿಯಾಗಬಾರದು ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾಳೆ ಎಂದು ತಿಳಿದುಬಂದಿದೆ.

ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News