ಜಲತಜ್ಞ, ದಲಿತ ಚಳವಳಿಗಾರ ಕೆ.ನಾರಾಯಣಸ್ವಾಮಿ ನಿಧನ

Update: 2019-02-17 10:06 GMT

ಚಿಕ್ಕಬಳ್ಳಾಪುರ, ಫೆ.17: ನಾಡಿನ ಹೆಸರಾಂತ ಜಲತಜ್ಞ, ದಲಿತ ಚಳವಳಿಗಾರ ಕೆ.ನಾರಾಯಾಣಸ್ವಾಮಿ ರವಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರು ಕೆಲ ತಿಂಗಳುಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದ ಕೆ.ನಾರಾಯಾಣಸ್ವಾಮಿ ಅವರು ದಲಿತ ಚಳವಳಿ ಕಟ್ಟುವಲ್ಲಿಯೂ ಪ್ರಮುಖ ಪಾತ್ರ ವಹಿಸಿದವರು. ದಮನಿತ ಮತ್ತು ಶೋಷಣೆ ಒಳಗಾದವರಿಗೆ ಧ್ವನಿಯಾದರು. ಅವರ ಪರ ಹೋರಾಟ ರೂಪಿಸಲು ಪ್ರಯತ್ನಿಸಿದರು.

ದೀರ್ಘಕಾಲ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಅವರು ನಿವೃತ್ತಿ ನಂತರವೂ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಪರಿಸರ ಮತ್ತು ನೀರಿನ ಸಂರಕ್ಷಣೆ ಸೇರಿದಂತೆ ಆರೋಗ್ಯದ ರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿದ್ದರು.

ಸಾಹಿತಿಯೂ ಆಗಿದ್ದ ಅವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಹಲವು ಕೃತಿಗಳು ಪ್ರಶಸ್ತಿಗೂ ಪಾತ್ರವಾಗಿವೆ.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News