ಹಣ ನೀಡಲಿಲ್ಲ ಎಂಬ ಕಾರಣಕ್ಕೆ ತಾಯಿಯನ್ನೇ ಹತ್ಯೆಗೈದ ಮಗ

Update: 2019-02-17 15:50 GMT

ಶೃಂಗೇರಿ, ಫೆ.17: ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಪಾಪಿ ಮಗನೋರ್ವ ಹೆತ್ತ ತಾಯಿಯನ್ನೇ ಹತ್ಯೆಗೈದ ಘಟನೆ ತಾಲೂಕಿನ ಬೇಗಾರು ಗ್ರಾ.ಪಂ ವ್ಯಾಪ್ತಿಯ ಅಸನಬಾಳು ಗ್ರಾಮದಲ್ಲಿ ಇಂದು ನಡೆದಿದೆ.

ಇಂದು ಮಧ್ಯಾಹ್ನ ಅಸನಬಾಳು ಗ್ರಾಮ ನಿವಾಸಿ ಹುಕ್ಕಲಿಯ ಡಾಕಮ್ಮ (60) ಎಂಬವರನ್ನು ಅವರ ಮಗ ನಂದೀಶ ದೊಣ್ಣೆಯಲ್ಲಿ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. 

ನಂದೀಶ ನಿತ್ಯವೂ ತಾಯಿಯ ಬಳಿ ಹಣ ನೀಡುವಂತೆ ಪೀಡಿಸುತ್ತಿದ್ದ. ರವಿವಾರವೂ ಹಣಕ್ಕಾಗಿ ಪೀಡಿಸಿದ್ದು, ಆದರೆ ಹಣ ನೀಡಲು ತಾಯಿ ನಿರಾಕರಿಸಿದ ಕಾರಣ ಕುಪಿತಗೊಂಡ ನಂದೀಶ ತಾಯಿಯ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. 

ನಂದೀಶ್‍ನನ್ನು ಶೃಂಗೇರಿ ಪೋಲಿಸರು ಬಂಧಿಸಿದ್ದು, ಘಟನೆ ಸಂಬಂಧ ತನಿಖೆ ಮುಂದುವರಿದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News