ಬೈಕ್‍- ಕಾರು ಅಪಘಾತ: ಗ್ರಾಪಂ ಸದಸ್ಯ ಸೇರಿ ಇಬ್ಬರು ಮೃತ್ಯು

Update: 2019-02-18 13:10 GMT

ಶಿವಮೊಗ್ಗ, ಫೆ. 18: ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿ ತೆರಳುತ್ತಿದ್ದ ಸವಾರ ಹಾಗೂ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ನಗರದ ಹೊರವಲಯ ಗುಡ್ಡದ ಅರಕೆರೆ ಗ್ರಾಮದ ಪೆಸೆಟ್ ಕಾಲೇಜು ಮುಂಭಾಗದ ಎನ್.ಹೆಚ್. 206 ರಲ್ಲಿ ಭಾನುವಾರ ನಡೆದಿದೆ. 

ಭದ್ರಾವತಿ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯತ್ ಸದಸ್ಯ ವೀರಭದ್ರಪ್ಪ (52) ಹಾಗೂ ಹೊರಬೈಲಿನ ಮಂಜುನಾಥ್ (50) ಮೃತಪಟ್ಟವರೆಂದು ಗುರತಿಸಲಾಗಿದೆ. ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಸ್ಥಳದಲ್ಲಿಯೇ ಅಸುನೀಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 

ಗುಡ್ಡದ ಅರಕೆರೆ ಗ್ರಾಮದ ಸಮೀಪದ ಶಕ್ತಿಧಾಮ ಬಡಾವಣೆಯಲ್ಲಿ ಆಯೋಜಿತವಾಗಿದ್ದ ಪರಿಚಯಸ್ಥರೋರ್ವರ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೈಕ್‍ನಲ್ಲಿ ಹಿಂದಿರುಗುವ ವೇಳೆ ಈ ಅಪಘಾತ ಸಂಭವಿಸಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News