ವಿವಾಹಿತೆ ನೇಣಿಗೆ ಶರಣು

Update: 2019-02-20 12:16 GMT

ಸೋಮವಾರಪೇಟೆ,ಫೆ.20: ವಿವಾಹಿತೆ ಮಹಿಳೆಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ಹಾಗನಲ್ಲು ಗ್ರಾಮದಲ್ಲಿ ನಡೆದಿದೆ.

ಹಾನಗಲ್ಲು ಗ್ರಾಮ ನಿವಾಸಿ ನೋಣು-ಕೊರಪಲಮ್ಮ ಅವರ ಪುತ್ರಿ, ಹೆಚ್.ಎನ್.ರತ್ನ(36) ಎಂಬವರು ನಿನ್ನೆ ರಾತ್ರಿ ಮನೆ ಸಮೀಪದ ಮಾವಿನ ಮರಕ್ಕೆ ವೇಲ್ ನಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ 4 ತಿಂಗಳ ಹಿಂದೆ ಶನಿವಾರಸಂತೆಯ ಮಹೇಂದ್ರ ಎಂಬಾತನೊಂದಿಗೆ ವಿವಾಹವಾಗಿದ್ದ ರತ್ನ ಅವರು, ನಿನ್ನೆ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News