ಮನವಿ ನೀಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆಗೆ ಯತ್ನಿಸಿದ ಬಿಜೆಪಿ ಶಾಸಕ ಎ.ಎಸ್ ಪಾಟೀಲ್

Update: 2019-02-20 13:52 GMT

ವಿಜಯಪುರ,ಫೆ.20: ಪೊಲೀಸ್ ಠಾಣೆ ಸ್ಥಾಪನೆ ಮಾಡುವಂತೆ ಮನವಿ ಮಾಡುತ್ತಿದ್ದ ವೇಳೆ ಮನವಿ ಮಾಡಿದ ವ್ಯಕ್ತಿಗೇ ಬಿಜೆಪಿ ಶಾಸಕ ಎಎಸ್ ಪಾಟೀಲ್ ನಡಹಳ್ಳಿ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಬಿಜೆಪಿ ಶಾಸಕ ಎಎಸ್ ಪಾಟೀಲ್ ನಡಹಳ್ಳಿ ಅವರು ಯುವ ಜನ ಸೇನೆ‌ ಅಧ್ಯಕ್ಷ‌ ಶಿವಾನಂದ ವಾಲಿ ಎಂಬವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.

ವೀರೇಶ್ವರ ಶರಣರ 100 ನೇ ಪುಣ್ಯ ಸ್ಮರಣೆ ನಿಮಿತ್ತ ನಾಲತವಾಡ ಪಟ್ಟಣಕ್ಕೆ‌ ಆಗಮಿಸಿದ್ದ ಶಾಸಕ ಎಎಸ್ ಪಾಟೀಲ್ ಅವರಲ್ಲಿ ಶಿವಾನಂದ ವಾಲಿ ಅವರು ನಾಲತವಾಡಕ್ಕೆ ಪೊಲೀಸ್ ಠಾಣೆ ಸ್ಥಾಪನೆ ಮಾಡುವಂತೆ ಮನವಿ ಮಾಡುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಹಿಂದೆ ಶಾಸಕರ ಬೆಂಬಲಿಗರ ಅವ್ಯವಹಾರ ಕುರಿತು ಶಿವಾನಂದ ವಾಲಿ ಆರೋಪ‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮನವಿ ಕೊಡಲು ಬಂದ ವಾಲಿ ಮೇಲೆ ಆಕ್ರೋಶಗೊಂಡು ಹಲ್ಲೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ನಂತರ ಶಾಸಕರ ವಿರುದ್ಧ ಶಿವಾನಂದ ವಾಲಿ ಸೇರಿ ಹಲವರು ಧಿಕ್ಕಾರ ಕೂಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಮುದ್ದೇಬಿಹಾಳ ಪೊಲೀಸರು ವಶಪಡಿಸಿ ಠಾಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News