ಪ್ರೇಮಿಗಳ ದಿನ ಹಸೆಮಣೆ ಏರಿದ್ದ ಜಿಲ್ಲಾಧಿಕಾರಿ, ಸಿಇಒ​ ದಂಪತಿ ಚಿಕ್ಕಮಗಳೂರಿಗೆ ವರ್ಗಾವಣೆ

Update: 2019-02-21 14:26 GMT

ಚಿಕ್ಕಮಗಳೂರು, ಫೆ.21: ದಾವಣಗೆರೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಬಗದಿ ಗೌತಮ್ ಅವರನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ, ದಾವಣಗೆರೆ ಜಿ.ಪಂ. ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಅಶ್ವಥಿರವರನ್ನು ಚಿಕ್ಕಮಗಳೂರು ಜಿ.ಪಂ. ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಾಗಿ ನಿಯೋಜನೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ. 

ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಕೆ.ಶ್ರೀರಂಗಯ್ಯರವರನ್ನು ಬೆಂಗಳೂರಿನ ಎಂಟರ್‍ಪ್ರೈನ್ಯೂರ್ ಶೀಫ್ ಆ್ಯಂಡ್ ಲೈವ್‍ಲಿಹುಡ್‍ಗೆ ವರ್ಗಾವಣೆಗೊಳಿಸಿದೆ. ಚಿಕ್ಕಮಗಳೂರು ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿ.ಸತ್ಯಭಾಮ ಅವರನ್ನು ಚಾಮರಾಜನಗರಕ್ಕೆ ವರ್ಗಾವಣೆಗೊಳಿಸಿದೆ.

ಈ ವರ್ಗಾವಣೆ ಪಟ್ಟಿಯಲ್ಲಿ ಫೆ.14ರ ಪ್ರೇಮಿಗಳ ದಿನಾಚರಣೆಯೆಂದು ಹಸೆಮಣೆ ಏರಿದ ಐಎಎಸ್ ದಂಪತಿಗೆ ಒಂದೇ ಜಿಲ್ಲೆಗೆ ವರ್ಗಾವಣೆಗೊಳಿಸಿ ಒಟ್ಟಿಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News