ಟೆಂಪೋ ಉರುಳಿ 24 ಮಂದಿಗೆ ಗಾಯ

Update: 2019-02-21 15:04 GMT

ಕಾಳಮುದ್ದನದೊಡ್ಡಿ, ಫೆ.21: ಸಂಬಂಧಿಕರ ಶವ ನೋಡಲು ಹೊರಟಿದ್ದ ಟೆಂಪೋ ಉರುಳಿ 24 ಮಂದಿ ಗಾಯಗೊಂಡಿರುವ ಘಟನೆ ಇಲ್ಲಿಗೆ ಸಮೀಪದ ಗುರುದೇವರಹಳ್ಳಿ- ಬೊಮ್ಮನದೊಡ್ಡಿ ಮಾರ್ಗಮಧ್ಯೆ ನಡೆದಿದೆ.

ಇಲ್ಲಿಗೆ ಸಮೀಪದ ಅಜ್ಜಹಳ್ಳಿ ಗ್ರಾಮದಲ್ಲಿ ಮೃತಪಟ್ಟಿದ್ದ ಅಂಕೇಗೌಡರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಳವಳ್ಳಿ ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ಹಲವರು ಟಾಟಾ ಏಸ್ ವಾಹನದಲ್ಲಿ ತೆರಳುತ್ತಿದ್ದರು. ಚಾಲಕನ ಅಜಾಗರುಕತೆಯ ಪರಿಣಾಮದಿಂದ ಗುರುದೇವರಹಳ್ಳಿ-ಬೊಮ್ಮನದೊಡ್ಡಿ ರಸ್ತೆ ಮಗ್ಗಲಿಗೆ ಟೆಂಪೊ ಉರುಳಿದೆ.

ಟೆಂಪೊದಲ್ಲಿದ್ದ 24 ಮಂದಿ ಗಾಯಗೊಂಡಿದ್ದಾರೆ. ಇವರಿಗೆ ಭಾರತೀನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಪುಟ್ಟಸ್ವಾಮಿ, ದೊಡ್ಡಗಂಡು, ನೇತ್ರಾ, ಚೌಡಮ್ಮ, ಗೌರಮ್ಮ, ಕೆಂಪಾಜಮ್ಮ, ಬಸವರಾಜು, ಚಿಕ್ಕಮರೀಗೌಡ, ಕರಿಯಪ್ಪ, ಸರೋಜಮ್ಮ, ವಸಂತ, ಮಾದೇವಮ್ಮ, ಜಯಮ್ಮ ಸೇರಿದಂತೆ ಇತರರಿಗೆ ಸಣ್ಣಪುಟ್ಟ ಗಾಯಗೊಂಡರೆ, ಮಂಚೇಗೌಡ ಮತ್ತು ಕೆಂಪಮ್ಮ ಎಂಬವರು ಗಂಭೀರ ಗಾಯಗೊಂಡಿದ್ದು ಇವರನ್ನು ಬೆಂಗಳೂರಿಗೆ ರವಾನಿಸಲಾಗಿದೆ. ಸದ್ಯಕ್ಕೆ ಎಲ್ಲರೂ ಪ್ರಾಣಾಪಾಯದಿಂದ ಪರಾಗಿದ್ದಾರೆ. ಭಾರತೀನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News