ಅರಳಿ ಗಿಡದ ಸೊಪ್ಪು ತಿಂದು 25 ಕುರಿಗಳು ಸಾವು

Update: 2019-02-25 14:16 GMT

ಚಿಕ್ಕಮಗಳೂರು, ಫೆ.25: ಅರಳಿ ಗಿಡದ ಸೊಪ್ಪು ತಿಂದು 25 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಕಳಸಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಸೋಮವಾರ ವರದಿಯಾಗಿದೆ.

ಕಳಸಾಪುರ ಗ್ರಾಪಂ ವ್ಯಾಪ್ತಿಯ ದೇವಗೊಂಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಶಿವಣ್ಣ ಎಂಬವರಿಗೆ ಸೇರಿದ ಕುರಿಗಳು ಎಂದಿನಂತೆ ಹೊಲದ ಬದಿಯಲ್ಲಿ ಮೇಯುತ್ತಿದ್ದ ವೇಳೆ ಅರಳಿ ಗಿಡಗಳ ಸೊಪ್ಪು ತಿಂದಿವೆ ಎಂದು ತಿಳಿದು ಬಂದಿದ್ದು, ಸೊಪ್ಪು ತಿಂದ ಬಳಿಕ ಅಸ್ವಸ್ಥಗೊಂಡಿದ್ದ 25 ಕುರಿಗಳು ಏಕಾಏಕಿ ಮೃತಪಟ್ಟಿವೆ ಎಂದು ಹೇಳಲಾಗುತ್ತಿದೆ. 

ಘಟನೆಯಿಂದಾಗಿ ಕುರಿಗಳ ಮಾಲಕ ಲಕ್ಷಾಂತರ ರೂ. ನಷ್ಟವಾಗಿದ್ದು, ಸೂಕ್ತ ಪರಿಹಾರ ಒದಗಿಸಬೇಕೆಂದು ಶಿವಣ್ಣ ಮನವಿ ಮಾಡಿದ್ದಾರೆ. ಘಟನೆಯ ಸುದ್ದಿ ತಿಳಿದು ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News