ಉಗ್ರರಿಗೆ ಉತ್ತರ ಕೊಡುವ ಕಾಲ ಆರಂಭವಾಗಿದೆ: ಸಂಸದೆ ಶೋಭಾ

Update: 2019-02-26 14:22 GMT

ಚಿಕ್ಕಮಗಳೂರು, ಫೆ.26: ಪುಲ್ವಾಮ ದಾಳಿ ನಡೆಸಿದ ಉಗ್ರರಿಗೆ ತಕ್ಕ ಉತ್ತರ ನೀಡುತ್ತೇನೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇದೀಗ ಅವರು ನುಡಿದಂತೆ ನಡೆದಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ತರೀಕೆರೆ ಪಟ್ಟಣದಲ್ಲಿ ನಡೆಯುತ್ತಿರುವ ದೇವಾಂಗ ನೌಕರರ ರಾಜ್ಯ ಮಟ್ಟದ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ 45 ಸೈನಿಕರ ಕಣ್ಣೀರಿಗೆ ಉತ್ತರ ನೀಡಲಾಗಿದೆ. ಉಗ್ರರ ಉಗ್ರವಾದಕ್ಕೆ ಬಂದೂಕಿನ ಮೂಲಕವೇ ಉತ್ತರ ನೀಡುವ ಕಾಲ ಆರಂಭವಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ದೇಶದ ಒಳಗೆ ಹಾಗೂ ಹೊರಗೆ ಉಗ್ರವಾದ ಹರಡುವವರಿಗೆ ತಕ್ಕ ಉತ್ತರ ನೀಡಲು ಕೇಂದ್ರ ಸರಕಾರ ಸಿದ್ಧವಾಗಿದೆ. ಮೋದಿ ಅವರಿಂದ ಉಗ್ರರಿಗೆ ಇನ್ನೂ ಶಾಸ್ತಿ ಕಾದಿದೆ. ವಾಯುದಾಳಿ ಮಾಡುವ ಮೂಲಕ ಪಾಕಿಸ್ತಾನದ ಗಡಿಯಲ್ಲಿದ್ದ ಉಗ್ರರ ಅಡಗುದಾಣಗಳನ್ನು ಸೈನಿಕರು ಧ್ವಂಸ ಮಾಡಿರುವ ಸುದ್ದಿ ಕೇಳಿ ಸಂತಸವಾಗಿದೆ. ಸೈನಿಕರನ್ನು ಇಡೀ ದೇಶ ಕೊಂಡಾಡಬೇಕಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News