ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ದಾಳಿ: ಇಬ್ಬರು ಮಹಿಳೆಯರ ಬಂಧನ, ಓರ್ವ ಮಹಿಳೆಯ ರಕ್ಷಣೆ

Update: 2019-02-28 17:23 GMT

ಮೈಸೂರು,ಫೆ.28: ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿರುವ ನಗರದ ಸಿಸಿಬಿ ಪೊಲೀಸರು ಮೇಟಗಳ್ಳಿ ಠಾಣಾ ಸರಹದ್ದಿನ ಕುಂಬಾರಕೊಪ್ಪಲು ನಿಂಗಯ್ಯನ ಕೆರೆಯ ಸರ್ಕಾರಿ ಶಾಲೆಯ ಹಿಂಭಾಗದಲ್ಲಿರುವ ಮನೆಯೊಂದರ ಮೇಲೆ ದಾಳಿ ಮಾಡಿ, ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿ, ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ.

ಕುಂಬಾರಕೊಪ್ಪಲು ನಿಂಗಯ್ಯನ ಕೆರೆಯ ಮಹೇಶ ಎಂಬವರ ಪತ್ನಿ ಲಕ್ಷ್ಮೀ ಹಾಗೂ ಎನ್.ಆರ್.ಮೊಹಲ್ಲಾದ ಗಾಂಧಿನಗರ ರವಿ ಎಂಬವರ ಪತ್ನಿ ಸುವರ್ಣ ಬಂಧಿತ ಮಹಿಳೆಯರಾಗಿದ್ದು, ವೇಶ್ಯಾವಾಟಿಕೆಗೆ ಬಳಕೆಯಾಗಿದ್ದ 2,210 ರೂ. ನಗದು ಹಣ ಹಾಗೂ 4 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಂಧೆಯಲ್ಲಿ ಸಿಲುಕಿದ್ದ ಮಹಿಳೆಯೊಬ್ಬಳನ್ನು ರಕ್ಷಣೆ ಮಾಡಲಾಗಿದೆ. ಮನೆಯ ಮಾಲಕ ಮಹದೇವಣ್ಣ ಪರಾರಿಯಾಗಿದ್ದು, ಆತನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News