ಬಾಳೆಗುಂಡಿಗೆ ಇಳಿದ ಇಬ್ಬರು ಉಸಿರುಗಟ್ಟಿ ಸಾವು

Update: 2019-03-02 16:27 GMT

ಚಾಮರಾಜನಗರ, ಮಾ.2: ಬಾಳೆಗುಂಡಿಗೆ ಇಳಿದ ಇಬ್ಬರು ಉಸಿರುಗಟ್ಟಿ ಮೃತಪಟ್ಟ ಘಟನೆ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ನಡೆದಿದೆ.

ಸಿದ್ದಶೆಟ್ಟಿ ಹಾಗೂ ಮಹದೇವಶೆಟ್ಟಿ ಅಲಿಯಾಸ್ ಮೇಷ್ಟ್ರು ಮೃತರು. ಹೊನ್ನೂರು ಗ್ರಾಮದ ಬಿಚಳ್ಳಿ ದಿನೇಶ್ ಎಂಬವರಿಗೆ ಸೇರಿದ ಬಾಳೆಹಣ್ಣು ಮಾಡುವ ಗುಳಿಗೆ ಇಳಿದ ಸಿದ್ದಶೆಟ್ಟಿ ಹಾಗೂ ಮಹದೇವಶೆಟ್ಟಿ ಮರಳಿ ಮೇಲೆಬರಲಾಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮೃತರ ಶವಗಳನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿರಿಸಲಾಗಿದೆ. ಯಳಂದೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News