ಮನೆಯ ಮೇಲ್ಛಾವಣಿಯಿಂದ ಬಿದ್ದು ಗಾಯಗೊಂಡಿದ್ದ ಯುವಕ ಮೃತ್ಯು

Update: 2019-03-04 18:24 GMT

ಸುಂಟಿಕೊಪ್ಪ, ಮಾ.4: ಮನೆಯ ಮೇಲ್ಛಾವಣಿ ಕೆಲಸ ನಿರ್ಮಿಸುವ ವೇಳೆ ಆಯತಪ್ಪಿ ಯುವಕನೋರ್ವ ಕೆಳಕ್ಕೆ ಬಿದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. 

ಮಧುರಮ್ಮ ಬಡಾವಣೆಯ ನಿವಾಸಿ ವಳ್ಳಿ ಎಂಬವರ ಪುತ್ರ ಹರೀಶ್(20) ಎಂಬಾತನೇ ಮೃತಪಟ್ಟ ಯುವಕನಾಗಿದ್ದಾನೆ. ಕಳೆದ 2 ವಾರಗಳ ಹಿಂದೆ ಕುಶಾಲನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನೇರಿ ಮೇಲ್ಛಾವಣಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ನಿಯಂತ್ರಣ ತಪ್ಪಿಕೆಳಗೆ ಬಿದ್ದಿದ್ದಾನೆ. ಇದರಿಂದ ತಲೆಗೆ ತೀವ್ರವಾಗಿ ಗಾಯಗೊಂಡು ಕೋಮಾಸ್ಥಿತಿಗೆ ತಲುಪಿದ್ದ ಈತನಿಗೆ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಈ ಮದ್ಯೆ ಗಾಯಾಳು ಹರೀಶ್‌ರನ್ನು ಮೈಸೂರಿನಿಂದ ಮಡಿಕೇರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಮೃತಪಟ್ಟಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News