ಸಹೋದರರಿಬ್ಬರ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

Update: 2019-03-13 18:13 GMT

ವಿಜಯಪುರ,ಮಾ.13: ನಗರದಲ್ಲಿ ನಡೆದಿದ್ದ ಸಹೋದರಿಬ್ಬರ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. 

ವಿಜಯಪುರ ನಗರದ ನಿವಾಸಿಗಳಾದ ಚಾಂದಪೀರಾ ಇನಾಮದಾರ (46), ಸಕಾಫ್ ರೋಜಾ ಬಳಿಯ ಅಥಣಿ ಗಲ್ಲಿ ಜಾವೇದ್ ನದಾಫ್ (22) ಬಬ್ಲು ಸಾಲೂಟಗಿ (24) ಮುಸ್ತಪಾ ಢವಳಗಿ (28) ಬಂಧಿತ ಆರೋಪಿಗಳು.

ಕಳೆದ ಫೆ.23 ರಂದು ಮಧ್ಯರಾತ್ರಿ ನಗರದ ಜೋಡಗುಮ್ಮಟ ಹಾಗೂ ಜಯಕರ್ನಾಟಕ ನಗರದ ಬಳಿ ಜೋಡಿ ಕೊಲೆ ನಡೆದಿತ್ತು. ಘಟನೆಯಲ್ಲಿ ರಝಾಕ್ ಕುಚಬಲ್ (27) ಹಾಗೂ ಈತನ ಅಣ್ಣ ಸಲೀಂ ಕುಚಬಲ್ (32) ಇವರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಗಾಂಧಿ ಚೌಕ್ ಪೊಲೀಸ್ ಠಾಣೆ ಹಾಗೂ ಗೋಳಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಜವಾಬ್ದಾರಿಯನ್ನು ಡಿವೈಎಸ್‌ಪಿ ಡಿ.ಅಶೋಕ ಅವರಿಗೆ ವಹಿಸಲಾಗಿತ್ತು. ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಬಂಧಿಸಲಾಗಿದೆ. ಇನ್ನು ಕೊಲೆಗೆ ಬಳಸಿದ ಮಚ್ಚು, ಚಾಕು, ಕಾರು, ಹೊಂಡಾ ಶೈನ್ ಮೋಟಾರ್ ಸೈಕಲ್ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News