ಚಿಕ್ಕಮಗಳೂರು: ಟಿಪ್ಪರ್ ಹರಿದು ಮಹಿಳೆ ಮೃತ್ಯು

Update: 2019-03-15 18:25 GMT

ಚಿಕ್ಕಮಗಳೂರು, ಮಾ.15: ಮಹಿಳೆ ಮೇಲೆ ಟಿಪ್ಪರ್ ಲಾರಿಯೊಂದು ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದಲ್ಲಿ ಶುಕ್ರವಾರ ಸಂಜೆ ವರದಿಯಾಗಿದೆ.

ನಗರದ ನಿವಾಸಿ ಲಕ್ಷ್ಮೀ(43) ಮೃತಪಟ್ಟ ಮಹಿಳೆ ಎಂದು ತಿಳಿದು ಬಂದಿದ್ದು, ಲಕ್ಷ್ಮೀ ಅವರು ತನ್ನ ಪತಿಯ ಬೈಕ್‍ನಲ್ಲಿ ನಗರದ ಶೃಂಗಾರ್ ಸರ್ಕಲ್ ಬಳಿ ಬರುತ್ತಿದ್ದ ವೇಳೆ ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಬೈಕ್‍ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯಿಂದಾಗಿ ಲಕ್ಷ್ಮೀ ಅವರು ರಸ್ತೆ ಉರುಳಿದ್ದು ಈ ವೇಳೆ ಟಿಪ್ಪರ್ ಲಾರಿ ಆಕೆಯ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ.

ಘಟನೆಯಲ್ಲಿ ಲಕ್ಷ್ಮೀ ಪತಿಗೂ ಗಾಯವಾಗಿದ್ದು, ಅವರ ಒಂದು ಕಾಲು ಮುರಿದಿದೆ ಎಂದು ಹೇಳಲಾಗುತ್ತಿದೆ. ಘಟನೆ ಬಳಿಕ ಲಾರಿ ಚಾಲಕನಿಗೆ ಸಾರ್ವಜನಿರಕು ಥಳಿದ್ದಾರೆ. ನಗರ ಠಾಣಾ ಪೊಲೀಸರು ಸ್ಥಳಕ್ಕಾಮಿಸಿ ಚಾಲಕ ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News