ನನ್ನದು ಮಂಡ್ಯ ಜನತೆಯ ಪಕ್ಷ: ಸುಮಲತಾ ಅಂಬರೀಶ್

Update: 2019-03-22 15:51 GMT

ಮಂಡ್ಯ, ಮಾ.22: ನನ್ನದು ಮಂಡ್ಯ ಜನತೆಯ ಪಕ್ಷ ಎಂದು ಲೋಕಸಭೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ತನ್ನ ಫೇಸ್ಬುಕ್‍ನಲ್ಲಿ ಹೇಳಿಕೊಂಡಿದ್ದಾರೆ.

ನಾನು ಸ್ವತಂತ್ರ ಅಭ್ಯರ್ಥಿ ಆಗಬೇಕೆಂದು ಮಂಡ್ಯದ ಜನತೆ ನನಗೆ ಒತ್ತಾಯಿಸಿದ್ದು, ಒತ್ತಾಯವನ್ನು ಸ್ವೀಕರಿಸಿ, ಸ್ವತಂತ್ರ ಅಭ್ಯರ್ಥಿಯಾಗಿದ್ದೇನೆ. ಎಲ್ಲವೂ ಒಳ್ಳೆಯ ನಿರ್ಧಾರಗಳೇ ಎಂದು ನನಗೆ ಅನ್ನಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ನನ್ನನ್ನು ಎಲ್ಲಾ ಪಕ್ಷದ  ಕಾರ್ಯಕರ್ತರು, ಅಭಿಮಾನಿಗಳು ಬೆಂಬಲಿಸುತ್ತಿದ್ದಾರೆ. ನಾನು ಸ್ವತಂತ್ರ ಅಭ್ಯರ್ಥಿಯಾಗಿರುವುದರಿಂದ ಯಾರಿಗೂ ನನ್ನನ್ನು ಬೆಂಬಲಿಸಲು ಕಟ್ಟುಪಾಡುಗಳು ಇಲ್ಲ. ನನ್ನದು ಮಂಡ್ಯ ಜನತೆಯ ಪಕ್ಷ, ಹೃದಯವಂತನ ಪಕ್ಷ ಎಂದು ಅವರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News