ಶಿವಳ್ಳಿ ಸಹೋದರನಾಗಿ ಸಂಕಷ್ಟಗಳಿಗೆ ಸ್ಪಂದಿಸುವೆ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-03-24 14:47 GMT

ಹುಬ್ಬಳ್ಳಿ, ಮಾ. 24: ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ಆಘಾತವಾಗಿದೆ. ಅವರ ಕುಟುಂಬದ ಸಹೋದರನಾಗಿ ಸಂಕಷ್ಟಗಳ ನಿವಾರಣೆಗೆ ಶ್ರಮಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಶನಿವಾರ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ಪೌರಾಡಳಿತ ಸಚಿವ ಶಿವಳ್ಳಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾತನಾಡಿದ ಅವರು, ಗುರುವಾರ ತಾವು ಧಾರವಾಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಪೂರ್ಣವಾಗಿ ಅವರು ನನ್ನೊಂದಿಗೆ ಇದ್ದರು.

ಕಟ್ಟಡ ಕುಸಿತದ ಸಂತ್ರಸ್ತರ ಬಗ್ಗೆ ಮಮ್ಮಲ ಮರುಗಿದ್ದರು. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಟಿದ ಸಂದರ್ಭದಲ್ಲಿ ಆ ಸಂಸ್ಥೆಯನ್ನು ಬಹಳ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಪಡಿಸುವ ಕನಸು ವ್ಯಕ್ತಪಡಿಸಿದ್ದರು. ಶಿವಳ್ಳಿ ಅವರೊಂದಿಗೆ ಆರೇಳು ತಿಂಗಳುಗಳಿಂದ ಬಹಳ ಆತ್ಮೀಯತೆ ಬೆಳೆದಿತ್ತು. ಇಲ್ಲಿ ನೆರೆದ ಜನಸ್ತೋಮ ನೋಡಿ, ಅವರ ಬಗೆಗಿನ ಗೌರವ ಇಮ್ಮಡಿಯಾಗಿದೆ. ಸದಾಕಾಲ ಜನರ ಸೇವೆಗೆ ಒತ್ತು ನೀಡಿದ್ದ ಸಿ.ಎಸ್.ಶಿವಳ್ಳಿ ಅವರು ಸ್ವಾರ್ಥರಾಗಿರಲಿಲ್ಲ. ವೈಯಕ್ತಿಕ ಆರ್ಥಿಕ ಸುಧಾರಣೆಗೆ ಯಾವುದೇ ಆಸೆ ಹೊಂದಿರಲಿಲ್ಲ. ಅವರು ಇಲ್ಲದ ಸಮಯದಲ್ಲಿ ನಾವೆಲ್ಲ ಅವರ ಕುಟುಂಬದ ಸಂಕಷ್ಟಗಳಲ್ಲಿ ಭಾಗಿಯಾಗೋಣ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News