ಸಾಗರ: ವಿದ್ಯುತ್ ಶಾಕ್ ಗೆ ಯುವಕ ಬಲಿ

Update: 2019-03-29 08:25 GMT

ಸಾಗರ: ಇಲ್ಲಿನ ಎಸ್ ನಗರ ನಿವಾಸಿ ವಿದ್ಯುತ್ ಶಾಕ್ ಗೆ ಬಲಿಯಾದ ಘಟನೆ ನಡೆದಿದೆ.

ಮೃತರನ್ನು ಇಲ್ಲಿನ ನಿವಾಸಿ ಸಿರಾಜ್ (35) ಎಂದು ಗುರುತಿಸಲಾಗಿದೆ.

ತನ್ನ ಸ್ನೇಹಿತನ ಹೊಸ ಮನೆಯ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಸಿರಾಜ್ ಗೋಡೆಗೆ ನೀರು ಹಾಯಿಸುತ್ತಿದ್ದ ಸಂದರ್ಭದಲ್ಲಿ ಗೋಡೆಯ ಪಕ್ಕದಲ್ಲಿಯೇ ಇದ್ದ ವಿದ್ಯುತ್ ಕೇಬಲ್ ಅನ್ನು ಅವರು ಗಮನಿಸಿರಲಿಲ್ಲಾ. ನೀರು ಹಾಯಿಸಿ ಗೋಡೆ ಹಸಿಯಾಗಿದೆಯೇ ಎಂದು ಮುಟ್ಟಿ ನೋಡಿದ್ದಾರೆ. ತಕ್ಷಣವೇ ವಿದ್ಯುತ್ ಶಾಕ್ ಹೊಡೆದಿದ್ದು, ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News