ಚುನಾವಣೆ ಪ್ರಚಾರ ವೇಳೆ ಸಚಿವ ತಮ್ಮಣ್ಣಗೆ ಗ್ರಾಮಸ್ಥರ ತರಾಟೆ

Update: 2019-03-30 17:21 GMT

ಮಂಡ್ಯ, ಮಾ.30: ಮದ್ದೂರು ತಾಲೂಕಿನ ದುಂಡನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಪರ ಚುನಾವಣೆ ಪ್ರಚಾರಕ್ಕೆ ಹೋದಾಗ, ಗ್ರಾಮಸ್ಥರು 35 ವರ್ಷದಿಂದ ಹಕ್ಕುಪತ್ರ ಕೊಡಿಸಿಲ್ಲ ಎಂದು ಆರೋಪಿಸಿ ಸಚಿವ ಡಿ.ಸಿ.ತಮ್ಮಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.

ಹಕ್ಕುಪತ್ರ ಕೊಡಿಸಿ ಎಂದು ಪ್ರಚಾರಕ್ಕೆ ಬಂದ ಜೆಡಿಎಸ್ ಅಭ್ಯರ್ಥಿ ನಿಖಿಲ್‍ಗೆ ಮನವಿ ಮಾಡಿದರು. ಸಿಎಂ ಕುಮಾರಸ್ವಾಮಿ ಸರಕಾರ ಬಂದು 9 ತಿಂಗಳಾಗಿದೆ. ಚುನಾವಣೆ ಬಳಿಕ ನಾನು ಮತ್ತು ಸಚಿವರು ನಿಮ್ಮ ಸಮಸ್ಯೆ ಬಗೆಹರಿಸುವುದಾಗಿ ನಿಖಿಲ್ ಸಮಜಾಯಿಸಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News