×
Ad

ಉನ್ನತ ವ್ಯಾಸಂಗ ಮಾಡಿ ನಮ್ಮ ದೇಶದಲ್ಲಿಯೆ ಸೇವೆ ಸಲ್ಲಿಸಬೇಕು: ಟಿ.ರಾಜಶೇಖರ್

Update: 2019-03-31 16:38 IST

ಚಿಕ್ಕಮಗಳೂರು: ಮಾ.31. ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ವಿದ್ಯಾಭ್ಯಾಸ ಮಾಡಿದ ಶಾಲೆ ಮತ್ತು ಗುರು ಹಿರಿಯರನ್ನು ಮರೆಯದೆ ನಮ್ಮ ದೇಶದಲ್ಲಿಯೆ ಸೇವೆ ಸಲ್ಲಿಸಿದಾಗ ಆತ್ಮ ತೃಪ್ತಿ ದೊರೆಯುತ್ತದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಟಿ.ರಾಜಶೇಖರ್ ತಿಳಿಸಿದರು.

ಶನಿವಾರ ಸಂಜೆ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಜೆವಿಎಸ್ ಶಾಲೆಯು ಪ್ರಾರಂಭವಾಗಿ 38 ವರ್ಷವಾಗಿದೆ ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ದೇಶ ವಿದೇಶಗಳಲ್ಲೂ ಸಹ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಹಳೆಯ ವಿದ್ಯಾರ್ಥಿಗಳೆಲ್ಲ ಹೊಸ ಸಂಘವನ್ನು ಪ್ರಾರಂಭಿಸಿ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಸ್ಪೂರ್ತಿ ತುಂಬುವುದರ ಜೊತೆಗೆ ಸಂಸ್ಥೆಯ ಏಳಿಗೆಗೆ ಸಹಕರಿಸಬೇಕೆಂದು ತಿಳಿಸಿದರು.

ನೂತನ ಸಂಘವು ಪ್ರೌಢಶಾಲೆ ಮತ್ತು ಪಿಯುಸಿ ಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಗಳಿಸಿ ಆರ್ಥಿಕವಾಗಿ ದುರ್ಬಲ ಆಗಿರುವವರಿಗೆ ಸುಮಾರು 100 ರಿಂದ 150ಜನ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸವನ್ನು ನೀಡಬೇಕೆಂದು ಉದ್ದೇಶಿಸಿದೆ ಎಂದರು.

ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮೊಹಮ್ಮದ್ ಯೂನಸ್, ಉಪಾಧ್ಯಕ್ಷ ದರ್ಶನ್, ಕಾರ್ಯದರ್ಶಿ ಜೈಜಿತ್, ಸಹಕಾರ್ಯದರ್ಶಿ ಸೋನಾಲಿ, ಸಂಘಟನಾ ಕಾರ್ಯದರ್ಶಿ ನಾಸೀರ್, ಖಜಾಂಚಿ ಸಚಿನ್, ಸಾಂಸ್ಕೃತಿಕ ಕಾರ್ಯದರ್ಶಿ ಅರ್ಜುನ್‍ಗೌಡ ಮತ್ತು ಹಿತಾ, ಕ್ರೀಡಾ ಕಾರ್ಯದರ್ಶಿ ಅಮಿತ್, ನಿರ್ದೇಶಕರಾಗಿ ಹೇಮಂತ್, ಸೃಜನ್‍ಗೌಡ, ಅಜೀಜ್, ಅರ್ಚನ, ಅಂಕಿತ್‍ಗೌಡ, ಅನುಶ್ರೀ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಸಿಇಓ ಕುಳ್ಳೇಗೌಡ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಶ್ಯಾಂ, ವಿಕ್ರಾಂತ್, ಸಲಹಾ ಸಮಿತಿ ಸದಸ್ಯರಾದ ಸುರೇಂದ್ರ, ಹಳೆಯ ವಿದ್ಯಾರ್ಥಿಗಳಾದ ಸಚಿನ್.ಪಿ.ಶೆಟ್ಟಿ, ಸಹಾಯಕ ಪ್ರಾದೇಶಿಕ ಆಯುಕ್ತರು, ಭವಿಷ್ಯ ನಿಧಿ ಕಚೇರಿ ವೈಧ್ಯರಾದ ವಿನೋದ್, ಶಾಲಾ ಪ್ರಾಂಶುಪಾಲ ಕ್ರಿಸ್ಟೋಫರ್ ಕೊಟಿಯಾನ್, ಮ್ಯಾನೇಜರ್ ರಾಜು, ದೈಹಿಕ ಶಿಕ್ಷಕ ಶಂಕರೇಗೌಡ, ಶಾಲಾ ಶಿಕ್ಷಕಿ ಪ್ರಮೀಳ, ಶಾಂತ, ಶ್ರೀಲತ, ಸಹನ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News