ವಾದ್ರಾಗೆ ನಿರೀಕ್ಷಣಾ ಜಾಮೀನು ಮಂಜೂರು

Update: 2019-04-01 19:00 GMT

ಹೊಸದಿಲ್ಲಿ,ಎ.1: ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ತನಿಖೆಯನ್ನು ಎದುರಿಸುತ್ತಿರುವ ರಾಬರ್ಟ್ ವಾದ್ರಾ ಅವರಿಗೆ ಇಲ್ಲಿಯ ವಿಶೇಷ ನ್ಯಾಯಾಲಯವು ಸೋಮವಾರ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ. ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ವಿದೇಶ ಪ್ರಯಾಣ ಮಾಡದಂತೆ ನಿರ್ದೇಶ ನೀಡಿರುವ ಅದು, ಹಲವಾರು ಇತರ ಷರತ್ತುಗಳನ್ನೂ ವಿಧಿಸಿದೆ.

 ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಅವರು ಸಾಕ್ಯಾಧಾರಗಳನ್ನು ತಿರುಚದಂತೆ,ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಮತ್ತು ತನಿಖಾಧಿಕಾರಿಗಳು ಕರೆದಾಗ ತನಿಖೆಗೆ ಹಾಜರಾಗುವಂತೆಯೂ ವಾದ್ರಾಗೆ ಆದೇಶಿಸಿದರು. ಐದು ಲ.ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಭದ್ರತೆಯನ್ನು ಒದಗಿಸುವಂತೆಯೂ ಅವರು ಸೂಚಿಸಿದರು.

ಲಂಡನ್ನಿನಲ್ಲಿ 1.9 ಮಿ.ಪೌಂಡ್‌ಗಳ ವೌಲ್ಯದ ಆಸ್ತಿಯ ಖರೀದಿಯಲ್ಲಿ ಅಕ್ರಮ ಹಣದ ವಹಿವಾಟು ನಡೆಸಿದ ಆರೋಪಗಳನ್ನು ವಾದ್ರಾ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News