ದಾವಣಗೆರೆ ಲೋಕಸಭಾ ಕ್ಷೇತ್ರ: ಐದು ನಾಮಪತ್ರ ಸಲ್ಲಿಕೆ

Update: 2019-04-02 13:21 GMT

ದಾವಣಗೆರೆ,ಎ.2: ಎಪ್ರಿಲ್ 23 ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಾ.28 ರಿಂದ ಆರಂಭವಾಗಿದ್ದು, ಎ.2 ರ ಇಂದು ಜಿಲ್ಲೆಯಲ್ಲಿ 5 ನಾಮಪತ್ರ ಸಲ್ಲಿಕೆಯಾಗಿದೆ.

ಸುಭಾನ್ ಖಾನ್(ಸಾಮಾನ್ಯ), ಕೆಟಿಜೆ ನಗರ, ದಾವಣಗೆರೆ (ವಯಸ್ಸು 52) ಪಕ್ಷೇತರ ಅಭ್ಯರ್ಥಿಯಾಗಿ, ಮಂಜುನಾಥ ಎ.ಕೆ(ಪ.ಜಾ), ತುಂಗಭದ್ರ ಬಡಾವಣೆ, ಹೊನ್ನಾಳಿ ಪಟ್ಟಣ, (32) ಪಕ್ಷೇತರ ಅಭ್ಯರ್ಥಿಯಾಗಿ, ಡಾ.ಶ್ರೀಧರ ಉಡುಪ (ಸಾಮಾನ್ಯ), ನಿಟುವಳ್ಳಿಯ ಹೊಸಬಡಾವಣೆ, ದಾವಣಗೆರೆ( 66)ಪಕ್ಷೇತರ ಅಭ್ಯರ್ಥಿಯಾಗಿ, ಬಿ.ವಿ.ತಿಪ್ಪೇಸ್ವಾಮಿ(ಸಾಮಾನ್ಯ), ಆವರಗೆರೆ, ದಾವಣಗೆರೆ ತಾಲೂಕು ( 48) ಪಕ್ಷೇತರ ಅಭ್ಯರ್ಥಿಯಾಗಿ ಹಾಗೂ ಅಬ್ದುಲ್ ನಝೀರ್ ಸಾಬ್(ಸಾಮಾನ್ಯ), ಹೊಸಹಳ್ಳಿ ಗ್ರಾಮ, ಹೊನ್ನಾಳಿ ತಾಲೂಕು (59) ಇವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾಧಿಕಾರಿ ಜಿ.ಎನ್.ಶಿವಮೂರ್ತಿ ಇವರಿಗೆ ಇಂದು ಜಿಲ್ಲಾಡಳಿತ ಕಚೇರಿಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News