ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ನೂತನ ಉಪಾಧ್ಯಕ್ಷರಾಗಿ ಮುಹಮ್ಮದ್ ಹಾರಿಸ್ ನೇಮಕ
Update: 2019-04-03 12:24 GMT
ಮಡಿಕೇರಿ,ಎ.3: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಅಲ್ಪಸಂಖ್ಯಾತರ ಘಟಕದ ನೂತನ ಉಪಾಧ್ಯಕ್ಷರನ್ನಾಗಿ ಮುಹಮ್ಮದ್ ಹಾರಿಸ್ ಎಡಪಾಲ ಅವರನ್ನು ನೇಮಕ ಮಾಡಲಾಗಿದೆ.
ಕೆಪಿಸಿಸಿ ಉಪಾಧ್ಯಕ್ಷ ಡಾ.ಜಾಫರ್ ಅಹಮ್ಮದ್ ಖಾನ್ ಹಾಗೂ ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ವೈ.ಸೈಯದ್ ಅಹಮ್ಮದ್ ಅವರು ನೇಮಕಾತಿ ಆದೇಶದ ಪ್ರತಿಯನ್ನು ಮಹಮ್ಮದ್ ಹಾರಿಸ್ ಅವರಿಗೆ ಹಸ್ತಾಂತರಿಸಿದರು.