ನೀವು ದಡ್ಡರಲ್ಲ ಎಂಬುದನ್ನು ನಿರೂಪಿಸಿ ಎಂದು ಮತದಾರರಿಗೆ ನಟ ಯಶ್ ಹೇಳಿದ್ದೇಕೆ?

Update: 2019-04-08 15:17 GMT

ಮಂಡ್ಯ, ಎ.8: ಯುಗಾದಿ ಹಬ್ಬದಲ್ಲಿ ಪ್ರಚಾರಕ್ಕೆ ಎರಡು ದಿನ ಬ್ರೇಕ್ ಪಡೆದುಕೊಂಡಿದ್ದ ಚಿತ್ರನಟ ಯಶ್, ಸೋಮವಾರ ಮರಳಿ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಪ್ರಚಾರ ನಡೆಸಿದರು.

ಮಳವಳ್ಳಿ ತಾಲೂಕಿನ ಡಿ.ಕೆ.ಹಳ್ಳಿಯಿಂದ ಪ್ರಚಾರ ಆರಂಭಿಸಿದರು. ಈ ಸಂದರ್ಭ ಜನರಿಂದ ಭರ್ಜರಿ ಸ್ವಾಗತ ದೊರೆಯಿತು. ಯಶ್‍ಗೆ ಕೈ, ಕಮಲ ಮುಖಂಡರು ಸಾಥ್ ನೀಡಿದರು. ನಂತರ ಹಲವು ಹಳ್ಳಿಗಳಲ್ಲಿ ರೋಡ್ ಶೋ ಮಾಡಿದರು.

ಪ್ರಚಾರದಲ್ಲಿ ಮಾತನಾಡಿದ ಯಶ್, ನಿಮ್ಮ ಪ್ರತಿನಿಧಿಯಾಗಿ ದೆಹಲಿಯಲ್ಲಿ ಕುಳಿತು ನಿಮ್ಮ ಸಮಸ್ಯೆ ಬಗೆಹರಿಹರಿಸಲು ಸಮರ್ಥವಾದ ವ್ಯಕ್ತಿ ಬೇಕು. ಆ ಎಲ್ಲಾ ಅರ್ಹತೆ ಮತ್ತು ಶಕ್ತಿ ಸುಮಲತಾ ಅಮ್ಮನ ಬಳಿ ಇದೆ. ಅವರು ನಿಮ್ಮ ಭಾಗದವರು. ಅವರಿಗೆ ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಸುಮಲತಾ ಅಂಬರೀಷ್ ಜತೆಗೆ ಮೂವರು ಸುಮಲತಾ ಅವರನ್ನು ಕಣದದಲ್ಲಿರಿಸಿ ಗೊಂದಲ ಸೃಷ್ಟಿಸುವ ಯತ್ನ ನಡೆಸಿ ನಿಮ್ಮನ್ನು ದಡ್ಡರು ಎಂದು ನಿರೂಪಿಸಲು ಹೊರಟಿದ್ದಾರೆ. ಆದರೆ, 20 ಕ್ರಮ ಸಂಖ್ಯೆಗೆ ಮತ ನೀಡಿ ದಡ್ಡರಲ್ಲ ಅನ್ನೋದನ್ನು ನಿರೂಪಿಸಬೇಕು ಎಂದು ಅವರು ಕರೆ ನೀಡಿದರು.

ಡಿ.ಕೆ.ಹಳ್ಳಿ, ಹಲಗೂರು, ಪೂರಿಗಾಲಿ, ಕಿರುಗಾವಲು ಸೇರಿ ಸುಮಾರು 33 ಹಳ್ಳಿಗಳಲ್ಲಿ ಯಶ್ ಪ್ರಚಾರ ಕೈಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News