ದಲಿತರಿಗೆ ಏನು ಮಾಡಿದ್ದೀರಿ?, 10 ವರ್ಷಗಳಲ್ಲಿ ನಿಮ್ಮ ಸಾಧನೆ ಏನು: ಕೇಂದ್ರ ಸಚಿವ ಜಿಗಜಿಣಗಿಗೆ ಮತದಾರನಿಂದ ತರಾಟೆ

Update: 2019-04-09 11:28 GMT

ವಿಜಯಪುರ, ಎ. 9: ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಚುನಾವಣಾ ಪ್ರಚಾರಕ್ಕೆ ತೆರಳಿದಾಗ ಮತದಾರನೊಬ್ಬ ಅವರನ್ನು ತರಾಟೆಗೆತ್ತಿಕೊಂಡ ವೀಡಿಯೊವೊಂದು ವೈರಲ್ ಆಗಿದೆ.

ವಿಜಯಪುರ ನಗರದ ಜಿಲ್ಲಾ ನ್ಯಾಯವಾಧಿಗಳ ಸಂಘದ ಸಭಾ ಭವನದಲ್ಲಿ ಮತ ಯಾಚಿಸಲು ರಮೇಶ ಜಿಗಜಿಣಗಿ ಬಂದಿದ್ದರು. ಈ ಸಂದರ್ಭ ಮಾತನಾಡಿದ ವಕೀಲ ತಿಪ್ಪಣ್ಣ ದೊಡ್ಡಮನಿ, ಎರಡು ಬಾರಿ ಸಂಸದರಾಗಿ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಆಗ ತಿಪ್ಪಣ್ಣರನ್ನ ಸಮಾಧಾನ ಪಡೆಸಲು ಇತರ ನ್ಯಾಯವಾದಿಗಳು ಮುಂದಾದರು. ಆದರೆ ಇದಕ್ಕೊಪ್ಪದ ಅವರು, 10 ವರ್ಷಗಳಲ್ಲಿ ನಿಮ್ಮ ಕೊಡುಗೆಯೇನು ?, ದಲಿತರಿಗಾಗಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ಈ ಪ್ರಶ್ನೆಗಳಿಂದ ಕೇಂದ್ರ ಸಚಿವರು ಮುಜುಗರಕ್ಕೀಡಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News