ಸುಮಲತಾ ಅವರಿಗೆ ನೀವೆಲ್ಲಾ ಶಕ್ತಿ ತುಂಬಿ: ಪ್ರಧಾನಿ ಮೋದಿ ಕರೆ

Update: 2019-04-09 15:13 GMT

ಮೈಸೂರು,ಎ.9: ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ನೀವೆಲ್ಲಾ ಶಕ್ತಿ ತುಂಬಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ಸುಮಲತಾ ಪರ ಪ್ರಚಾರ ಮಾಡಿದರು.

ತಮ್ಮ ಭಾಷಣದಲ್ಲಿ ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೆಸರು ಪ್ರಸ್ತಾಪಿಸಿದ ಮೋದಿ, ಅಂಬರೀಶ್ ಅವರ ಕೊಡುಗೆ ನಿಮಗೆ ಗೊತ್ತು, ಅಂಬರೀಶ್ ಕನ್ನಡಕ್ಕಾಗಿ ಮಾಡಿರುವ ಸೇವೆ ಅವೀಸ್ಮರಣೀಯ. ಸುಮಲತಾ ಅವರೂ ಕೂಡ ಅಂಬರೀಶ್ ಜೊತೆಯಲ್ಲಿ ಕನ್ನಡಕ್ಕಾಗಿ ಸೇವೆ ಮಾಡಿದ್ದಾರೆ. ಹಾಗಾಗಿ ಅವರಿಗೆ ಮತ್ತಷ್ಟು ಶಕ್ತಿ ತುಂಬಬೇಕಿದೆ ಎಂದು ಹೇಳಿದರು.

ಸುಮಲತಾ ಅವರಿಗೆ ಏನು ಮಾಡಿದರು ಎಂಬುದು ನಿಮಗೆ ಗೊತ್ತು. ಅವರಿಗೆ ಅನ್ಯಾಯ ಮಾಡಿದವರಿಗೆ ಏನು ಮಾಡಬೇಕು ಎಂದು ನೀವೇ ನಿರ್ಧರಿಸಿ ಎಂದು ಮೈತ್ರಿ ಪಕ್ಷಗಳ ನಾಯಕರುಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News