ಪಾಂಡವಪುರ: ವಿದ್ಯುತ್ ತಗುಲಿ ಇಬ್ಬರು ಕಾರ್ಮಿಕರು ಮೃತ್ಯು

Update: 2019-04-10 15:54 GMT

ಪಾಂಡವಪುರ: ಇಟ್ಟಿಗೆ ಗೂಡಿನ ಶೀಟ್‍ಗೆ ವೆಲ್ಡಿಂಗ್ ಮಾಡಲು ಹೋಗಿದ್ದ ಇಬ್ಬರು ಕಾರ್ಮಿಕರು ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಶ್ಯಾದನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಚಿನಕುರಳಿ ಹಾಗೂ ಎಲೆಕೆರೆ ಗ್ರಾಮದ ರಾಜಾಚಾರಿ ಹಾಗೂ ಮಹೇಶ್ ಎಂಬುವರು ಸಾವಿಗೀಡಾದ ಕಾರ್ಮಿಕರು.

ಘಟನೆ ವಿವರ: ಪಾಂಡವಪುರ ತಾಲೂಕಿನ ಶ್ಯಾದನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ವಿಶ್ವೇಶ್ವರಯ್ಯ ಎಂಬುವರಿಗೆ ಸೇರಿದ ಇಟ್ಟಿಗೆ ಗೂಡಿನ ಶೀಟ್‍ಗೆ ವೆಲ್ಡಿಂಗ್ ಮಾಡಲು ಹಲವಾರು ಮಂದಿ ಕಾರ್ಮಿಕರು ಇಟ್ಟಿಗೆ ಗೂಡಿನ ಮುಂದೆ ಹಾದುಹೋಗಿರುವ ವಿದ್ಯುತ್ ಮಾರ್ಗಕ್ಕೆ ನೇರ ಸಂಪರ್ಕ ಪಡೆದು ಕೆಲಸ ಮಾಡುತ್ತಿದ್ದರು. ಈ ವೇಳೆ ವಿದ್ಯುತ್ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ವಿದ್ಯುತ್ ಮಾರ್ಗದ ಸಂಪರ್ಕ ತೆಗೆಯಲು ಮುಂದಾದ ವೇಳೆ ವಿದ್ಯುತ್ ಸರಬರಾಜುಗೊಂಡು ವಿದ್ಯುತ್ ಸ್ಪರ್ಶವಾಗಿದೆ. ಈ ವೇಳೆ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದರು ಎನ್ನಲಾಗಿದೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News