ಸಿದ್ದರಾಮಯ್ಯ ಸಲಹೆಯಂತೆ ತುಮಕೂರಿನಿಂದ ತಾನು ಸ್ಪರ್ಧೆ : ಹೆಚ್ ಡಿ ದೇವೇಗೌಡ
Update: 2019-04-12 10:12 GMT
ಮಂಡ್ಯ, ಎ.12:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆಯಂತೆ ತುಮಕೂರಿನಿಂದ ಲೋಕಸಭೆಗೆ ತಾನು ಸ್ಪರ್ಧಿಸಿರುವುದಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಇಂದು ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಅವರು ಹಲವು ವರ್ಷಗಳ ಕಾಲ ಒಟ್ಟಿಗೆ ಕೆಲಸ ಮಾಡಿದ್ದೆವು. ಮಧ್ಯದಲ್ಲಿ ಸ್ವಲ್ಪ ಏನೋ ಆಯಿತು. ಈಗ ಮತ್ತೆ ನಾನು ಮತ್ತು ಅವರು ವೇದಿಕೆಯಲ್ಲಿ ಒಟ್ಟಿಗೆ ಇದ್ದೇವೆ ಎಂದರು.
ಈ ಸಮಾವೇಶಕ್ಕೆ ಒಬ್ಬರು ಕಾಂಗ್ರೆಸ್ ನಾಯಕರು ಬಂದಿಲ್ಲ. ಅವರ ಬಗ್ಗೆ ನಾನೇನು ಹೇಳುವುದಿಲ್ಲ. ಅವರ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಾರೆ ಎಂದು ದೇವೇಗೌಡರು ಚೆಲುವರಾಯಸ್ವಾಮಿಗೆ ತಿರುಗೇಟು ನೀಡಿದರು.