ಸಿಎಂ ಬೆಂಗಾವಲು ವಾಹನದಲ್ಲಿ ರೌಡಿ ಶೀಟರ್ ?

Update: 2019-04-12 18:57 GMT

ಮಂಡ್ಯ, ಎ.12: ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ರೌಡಿ ಶೀಟರ್ ಗಳ ಪರೇಡ್, ಗಡಿಪಾರು ಮಾಡುತ್ತಿರುವ ನಡುವೆಯೇ ಸಿಎಂ ಕುಮಾರಸ್ವಾಮಿ ಬೆಂಗಾವಲು ಪಡೆಯ ವಾಹನದಲ್ಲಿ ರೌಡಿ ಶೀಟರ್ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

ಮಳವಳ್ಳಿ ತಾಲೂಕಿನ ಕಿರುಗಾವಲು ವ್ಯಾಪ್ತಿಯಲ್ಲಿ ಪುತ್ರ ನಿಖಿಲ್ ಪರವಾಗಿ ಗುರುವಾರ ಸಿಎಂ ರೋಡ್ ಶೋ ವೇಳೆ ರೌಡಿ ಶೀಟರ್ ಪ್ರಕಾಶ್ ಸಿಎಂ ಬೆಂಗಾವಲು ಪಡೆ ವಾಹನದಲ್ಲಿ ಕುಳಿತು ಪ್ರಚಾರಕ್ಕೆ ಸಾಥ್ ನೀಡಿದ್ದಾನೆ ಎಂದು ತಿಳಿದುಬಂದಿದೆ.

ಪೊಲೀಸರ ವಾಹನದಲ್ಲಿಯೇ ರೌಡಿ ಶೀಟರ್ ಕಾಣಿಸಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸಿಎಂ ಜತೆ ಪ್ರಚಾರಕ್ಕಾಗಮಿಸಿದ್ದ ಪ್ರಕಾಶ್, ಕಿರುಗಾವಲು ಪೋಲಿಸ್ ಠಾಣೆಯ ರೌಡಿ ಶೀಟರ್ ಆಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News