ಆಮಿಷಕ್ಕೊಳಗಾಗದೆ ಸುಮಲತಾರನ್ನು ಗೆಲ್ಲಿಸಿ: ಯಶ್ ಮನವಿ

Update: 2019-04-14 18:28 GMT

ಮಂಡ್ಯ, ಎ.14: ಯಾರ ಬೆದರಿಕೆಗೂ ಬಗ್ಗದೆ ಸುಮಲತಾ ಅಂಬರೀಷ್ ಕೆಲಸ ಮಾಡುತ್ತಾರೆ. ಅವರಿಗೊಂದು ಅವಕಾಶ ಕೊಡಿ ಎಂದು ರಾಕಿಂಗ್ ಸ್ಟಾರ್ ಯಶ್ ಮತದಾರರಲ್ಲಿ ಮನವಿ ಮಾಡಿದ್ದಾರೆ.

ರವಿವಾರ ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಆನೆಗೋಳದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರವಾಗಿ ಪ್ರಚಾರ ಮಾಡಿದ ಅವರು, ಭ್ರಷ್ಟಾಚಾರದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಿದರು.

ಚುನಾವಣೆಯ ಕಡೆಯ 2 ದಿನ ಹುಷಾರಾಗಿರಿ. ಯಾವುದೇ ಆಮಿಷಗಳಿಗೆ ಒಳಗಾಗಬೇಡಿ. ಸುಮಲತಾ ಸಂಸತ್‍ಗೆ ಅರ್ಹ ಮಹಿಳೆಯಾಗಿದ್ದಾರೆ. ಬಹುಮತದಿಂದ ಗೆಲ್ಲಿಸಿ ಎಂದು ಅವರು ಕಿವಿಮಾತು ಹೇಳಿದರು.

ಪ್ರಚಾರದ ವೇಳೆ ಆಪೆ ಆಟೋದಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದ ಅಸ್ವಸ್ಥನಿಗೆ ದಾರಿ ಮಾಡಿಕೊಟ್ಟು ರಾಕಿಂಗ್ ಸ್ಟಾರ್ ಮಾನವೀಯತೆ ಮೆರೆದರು. ಅಭಿಮಾನಿಗಳು ಯಶ್‍ಗೆ ಕ್ರೇನ್ ಮೂಲಕ ಹಾರ ಹಾಕಿ ಗ್ರಾಮಕ್ಕೆ ಸ್ವಾಗತಿಸಿದರು. ಹಲವು ಗ್ರಾಮಗಳಲ್ಲಿ ಯಶ್ ಮತ ಪ್ರಚಾರ ಮುಂದುವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News