‘ನೋಟಾ’ಗೆ ಮತ ಹಾಕುವಂತೆ ಪ್ರಚಾರ ನಡೆಸಿಲ್ಲ: ತೇಜಸ್ವಿನಿ ಅನಂತಕುಮಾರ್

Update: 2019-04-15 12:57 GMT

ಬೆಂಗಳೂರು, ಎ. 15: ನಾನು ಮತದಾರರಿಗೆ ‘ನೋಟಾ’ಗೆ(ಯಾರಿಗೂ ಮತ ಹಾಕದಿರುವುದು) ಮತ ಚಲಾಯಿಸುವಂತೆ ಯಾವುದೇ ರೀತಿಯ ಪ್ರಚಾರ ನಡೆಸಿಲ್ಲ ಎಂದು ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ನಾನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಪಕ್ಷದ ಸಕ್ರಿಯ ಕಾರ್ಯಕರ್ತಳಾಗಿ ಪ್ರಚಾರ ನಡೆಸಿದ್ದೇನೆ. ಕೆಲವರು ಬಿಜೆಪಿ ಅಭ್ಯರ್ಥಿ ವಿರುದ್ಧ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆಂದು ತೇಜಸ್ವಿನಿ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಇದು ದುರದ್ದೇಶ ಪೂರ್ವಕ ವದಂತಿ. ಬಿಜೆಪಿಗೆ ಮತ ನೀಡಿ, ದೇಶ ಮೊದಲು. ಮೋದಿ ಮತ್ತೊಮ್ಮೆ ಎನ್ನುವುದು ಮುಖ್ಯವಾಗಿದೆ. ನೋಟಾದ ಪರವಾಗಿ ಪ್ರಚಾರ ನಡೆಸುತ್ತಿದ್ದೇನೆ ಎಂದು ಹೇಳುತ್ತಿರುವುದು ಆಧಾರರಹಿತ ಆರೋಪ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News