ಮದುವೆ ಮಂಟಪದಿಂದ ಬಂದು ಮತ ಚಲಾಯಿಸಿದ ನವವಧು

Update: 2019-04-18 11:50 GMT

ಸುಂಟಿಕೊಪ್ಪ,ಎ.18: ಮದುವೆ ಮಂಟಪದಲ್ಲಿ ಗಂಡನಿಂದ ತಾಳಿಕಟ್ಟಿಸಿದ ಮದುವಣಗಿತ್ತಿ ತನ್ನ ಕುಟುಂಬದವರೊಂದಿಗೆ ನೇರವಾಗಿ ಮತಗಟ್ಟೆಗೆ ಬಂದು ಮತಚಲಾಯಿಸಿ ಮತ್ತೆ ಮದುವೆ ಮಂಟಪಕ್ಕೆ ತೆರಳಿದ್ದು, ಮತದಾನದ ಪಾವಿತ್ರ್ಯತೆಗೆ ಮುನ್ನುಡಿ ಬರೆದಿದ್ದಾರೆ.

ಆಭ್ಯತ್‍ ಮಂಗಲ ಕಾನನ್‍ಙಂಡ್ ಟಾಟಾ ಎಸ್ಟೇಟಿನ ಕಾರ್ಮಿಕರಾದ ಆನಂದ-ರಾಣಿ ದಂಪತಿಯ ಪುತ್ರಿ ಮಂಜುಳಾ ಅವರ ವಿವಾಹ ಸಮಾರಂಭವು ಇಂದು ಮಡಿಕೇರಿಯ ಮಹಿಳಾ ಸಮಾಜದಲ್ಲಿ ನೆರವೇರಿತು. ಮದುವೆ ಮೂಹೂರ್ತದ ನಿಗದಿತ ಸಮಯದಲ್ಲಿ ಶಾಸ್ತ್ರೋಕ್ತವಾಗಿ ಗಂಡನಿಂದ ತಾಳಿ ಕಟ್ಟಿಸಿಕೊಂಡ ನಂತರ ಮಂಜುಳಾ ಹೆತ್ತವರು ಹಾಗೂ ಕುಟುಂಬದವರೊಂದಿಗೆ ವಾಹನದಲ್ಲಿ ಬಂದು ಆಭ್ಯತ್‍ಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಮತಚಲಾಯಿಸಿ ಪವಿತ್ರವಾದ ಮತದಾನ ಹಕ್ಕನ್ನು ತನ್ನ ವಿವಾಹದ ದಿನವೇ ಚಲಾಯಿಸಿ ಸಂತೃಪ್ತಿ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News