ಹಾವೇರಿ: ಎ.21 ರಂದು ಮುಈನುಸ್ಸುನ್ನಾ ಮಸೀದಿ ಲೋಕಾರ್ಪಣೆ

Update: 2019-04-20 16:08 GMT

ಹಾವೇರಿ,ಎ.20: ಉತ್ತರ ಕರ್ನಾಟಕದ ಶೈಕ್ಷಣಿಕ ಪ್ರಗತಿಗಾಗಿ ಕಳೆದ ನಾಲ್ಕು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಹಾವೇರಿಯ ಮುಈನುಸ್ಸುನ್ನಾ ಸಂಸ್ಥೆಯ ಅಧೀನದಲ್ಲಿ ನೂತನವಾಗಿ ನಿರ್ಮಿಸಿದ 'ಮುಈನುಸ್ಸುನ್ನಾ ಆಯಿಶಾ ಹನಫೀ ಮಸೀದಿ' ಇದರ ಉಧ್ಘಾಟನಾ ಸಮಾರಂಭವು ಎ.21 ರಂದು ರವಿವಾರ ನಡೆಯಲಿದೆ.

ಸಂಸ್ಥೆಯ ಅಧ್ಯಕ್ಷ ಸಯ್ಯದ್ ಅಬ್ದುರ್ರಹ್ಮಾನ್ ಸಹೀರ್ ಅಲ್ ಬುಖಾರಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಅಂತರಾಷ್ಟ್ರೀಯ ವಿದ್ವಾಂಸ, ಖ್ಯಾತ ವಾಗ್ಮಿ ಮದೀನದ ಸಯ್ಯಿದ್ ಉಮರ್ ಆದಿಲ್ ಅಲ್ ಜಿಫ್ರೀ ಅವರು ಮಸೀದಿಯ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಮುಸ್ತಫ ನಈಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News