ಬಬಲೇಶ್ವರ ಕ್ಷೇತ್ರದಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ್ ಬಿರುಸಿನ ಪ್ರಚಾರ

Update: 2019-04-21 17:30 GMT

ವಿಜಯಪುರ,ಎ.21: ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಗೃಹ ಸಚಿವ ಎಂ.ಬಿ.ಪಾಟೀಲ್‍ ತಮ್ಮ ಸ್ವಕ್ಷೇತ್ರ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಆಯ್ದ ಗ್ರಾಮಗಳಿಗೆ ಭೇಟಿ ನೀಡಿ, ಬಿರುಸಿನ ಪ್ರಚಾರ ಕೈಗೊಂಡರು.

ಬೀದರ್ ಲೋಕಸಭೆ ಅಭ್ಯರ್ಥಿ ಈಶ್ವರ್ ಖಂಡ್ರೆ ಪರ ಪ್ರಚಾರ ಮುಗಿಸಿ, ತಡ ರಾತ್ರಿ ಆಗಮಿಸಿದ್ದ ಸಚಿವರು ಇಂದು ಬೆಳಿಗ್ಗೆ ಬಬಲೇಶ್ವರ ಕ್ಷೇತ್ರಕ್ಕೆ ತೆರಳಿ, ಮೈತ್ರಿ ಅಭ್ಯರ್ಥಿ ಸುನೀತಾ ದೇವಾನಂದ ಚೌಹಾಣ ಪರ ಮತಯಾಚಿಸಿದರು.

ಮನೆ-ತೋಟಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಸೇರಿಸಿ, ಚುನಾವಣೆಯ ತಂತ್ರ ರೂಪಿಸಿದರು. ತಮ್ಮ ಸ್ವಕ್ಷೇತ್ರದ ನಿಡೋಣಿ, ಕಂಬಾಗಿ, ಗುಣದಾಳ, ಹೊಸೂರು, ದೇವರಗೆಣ್ಣೂರ, ಜೈನಾಪುರ ಹಾಗೂ ಸಂಜೆ ಬಬಲೇಶ್ವರಕ್ಕೆ ಭೇಟಿ ನೀಡಿದ ಎಂ.ಬಿ.ಪಾಟೀಲ್ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಮುಂದಿನ ಎರಡು ದಿನ ಮತದಾನ ಮುಗಿಯುವವರೆಗೆ ಕಾರ್ಯಕರ್ತರು ಹೆಚ್ಚಿನ ಶ್ರಮವಹಿಸುವಂತೆ ವಿನಂತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News