ಭೀಮಾನದಿಯಲ್ಲಿ ಮುಳುಗಿ ಇಬ್ಬರು ಸಹೋದರಿಯರು ಮೃತ್ಯು

Update: 2019-04-22 16:38 GMT

ವಿಜಯಪುರ, ಎ.22: ಭೀಮಾ ನದಿಯಲ್ಲಿ ಮುಳುಗಿ ಇಬ್ಬರು ಸಹೋದರಿಯರು ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಧೂಳಖೇಡ ಸಮೀಪದ ಚಿಂಚಪೂರ ಬಾಂದಾರ ಬಳಿ ಸೋಮವಾರ ನಡೆದಿದೆ.

ಇಂಡಿ ಪಟ್ಟಣದ ನಿವಾಸಿಗಳಾದ ಕಾವೇರಿ ಪವಾರ(17), ಪಲ್ಲವಿ ಪವಾರ (15) ಮೃತಪಟ್ಟವರು. ಈ ಇಬ್ಬರು ಸಹೋದರಿಗಳಾಗಿದ್ದು ಭೀಮಾ ನದಿಗೆ ಪೂಜೆಗೆಂದು ಬಂದ ವೇಳೆ ಈ ಘಟನೆ ನಡೆದಿದೆ. ಪೂಜೆಯ ಬಳಿಕ ನದಿಯಲ್ಲಿ ಈಜುತ್ತಿದ್ದ ಈ ಸಹೋದರಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News