ಕ್ರೂಸರ್ ಢಿಕ್ಕಿ: ಪಾದಚಾರಿ ಸಾವು

Update: 2019-04-25 15:14 GMT

ಶಿವಮೊಗ್ಗ, ಎ. 25: ವೇಗವಾಗಿ ಆಗಮಿಸಿದ ಕ್ರೂಸರ್ ವಾಹನ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಪಾದಚಾರಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿಕಾರಿಪುರ ಪಟ್ಟಣದ ಅಗ್ನಿಶಾಮಕ ದಳ ಕಚೇರಿಯ ಬಳಿ ನಡೆದಿದೆ.

ಪಟ್ಟಣದ ಚೆನ್ನಕೇಶವ ನಗರದ ನಿವಾಸಿ ಅಶೋಕ್ ಸಿಂಗ್ (50) ಮೃತಪಟ್ಟ ಪಾದಚಾರಿ ಎಂದು ಗುರುತಿಸಲಾಗಿದೆ. ಇವರು ರಾಜ್ಯ ಹೆದ್ದಾರಿ ದಾಟುವ ವೇಳೆ ಈ ಅವಘಡ ಸಂಭವಿಸಿದೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News