ಬಾಲಕಿಯ ಅಪಹರಣ ಪ್ರಕರಣ: ಪೊಲೀಸರಿಗೆ ಶರಣಾದ ಪ್ರೇಮಿಗಳು

Update: 2019-04-27 17:40 GMT

ಕೊಳ್ಳೇಗಾಲ, ಎ.27: ತಾಲೂಕಿನ ಮಧುವನಹಳ್ಳಿ ಗ್ರಾಮದ ಬಾಲಕಿಯನ್ನು ಅಪಹರಿಸಿದ್ದಾನೆ ಎನ್ನಲಾದ ಯುವಕ ಪವನ್, ಬಾಲಕಿ ಸಮೇತ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.

ತಾಲೂಕಿನ ಹೊಂಡರಬಾಳು ಜಾತ್ರೆಯ ಕೊಂಡೋತ್ಸವ ವೀಕ್ಷಣೆ ಮಾಡಲು ತೆರಳಿದ್ದ ಸಮಯದಲ್ಲಿ 17 ವರ್ಷದ ಬಾಲಕಿಯನ್ನು ಅಪಹರಣ ಮಾಡಿದ್ದಾನೆ ಎಂದು ಬಾಲಕಿಯ ತಂದೆ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ್ದರು. ದೂರಿನ ಅನ್ವಯ ಫೋಸ್ಕೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ಆದರೆ ಇಂದು ಯುವಕ ಪವನ್ ಬಾಲಕಿಯೊಂದಿಗೆ ಪಿಎಸ್ಸೈ ಮುಂದೆ ಹಾಜರಾಗಿದ್ದಾನೆ. ಹಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಹುಡುಗಿಯ ಮನೆಯಲ್ಲಿ ಬೇರೆ ಹುಡುಗನ ಜೊತೆ ಮದುವೆ ಮದುವೆ ಮುಂದಾಗಿರುವುದರಿಂದ ಎ.21ರಂದು ಹೊಂಡರಬಾಳು ಕೊಂಡೋತ್ಸವಕ್ಕೆ ಹೋದಾಗ ಪವನ್‌ನೊಟ್ಟಿಗೆ ಬೆಂಗಳೂರಿಗೆ ಹೋಗಿದ್ದೇವೆಂದು ಹೇಳಿಕೆ ನೀಡಿದ್ದಳು. ಪವನ್‌ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಬಾಲಕಿಯನ್ನು ಚಾ.ನಗರದ ಬಾಲಮಂದಿರದ ವಶಕ್ಕೆ ಕಳುಹಿಸಿಕೊಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News