ಓ ಮೆಣಸೇ…

Update: 2019-04-28 18:31 GMT

ಸಿಎಂ ಆಗುವ ವಿಷಯದಲ್ಲಿ ನನಗೆ ಆಸೆ ಇದೆಯೇ ಹೊರತು ದುರಾಸೆ ಇಲ್ಲ - ಎಂ.ಬಿ.ಪಾಟೀಲ್, ಸಚಿವ
 
ಕಾಂಗ್ರೆಸ್‌ನ ಉಳಿದವರ ಪಾಲಿಗೆ ಇದು ದುರಾಸೆಯಂತೆ ಕಾಣುತ್ತಿದೆ.

---------------------

ಬಾಬರಿ ಮಸೀದಿಯನ್ನು ಧ್ವಂಸ ಮಾಡಿದಕ್ಕೆ ನನಗೆ ಹೆಮ್ಮೆ ಇದೆ -ಸ್ವಾಧ್ವ್ವಿ ಪ್ರಜ್ಞಾಸಿಂಗ್ ಠಾಕೂರ್, ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಮತ್ತು ಕರ್ಕರೆಯನ್ನು ಕೊಂದವರ ಕುರಿತಂತೆಯೂ ಹೆಮ್ಮೆಯಿದ್ದಂತಿದೆಯಲ್ಲ?

---------------------

ಪ್ರಧಾನಿ ಮೋದಿಯನ್ನು ತೋರಿಸಿ ಮತ ಕೇಳುವುದೆಂದರೆ ಅಪ್ಪನನ್ನು ತೋರಿಸಿ ಮಗನಿಗೆ ಹೆಣ್ಣು ಕೇಳಿದಂತೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಪ್ರಿಯಾಂಕಾ ಗಾಂಧಿಯನ್ನು ತೋರಿಸಿ ಮತ ಯಾಚಿಸಿದರೆ?
---------------------

ನನಗೀಗ ಮಂಡ್ಯವೇ ಸಿಂಗಾಪುರ - ಸುಮಲತಾ ಅಂಬರೀಷ್, ಮಂಡ್ಯ ಪಕ್ಷೇತರ ಲೋಕಸಭಾ ಅಭ್ಯರ್ಥಿ
ಫಲಿತಾಂಶ ಉಲ್ಟಾ ಹೊಡೆದರೆ ಸಿಂಗಾಪುರವೇ ಮಂಡ್ಯ ಇರಬೇಕು, ಅಲ್ಲವೇ?

---------------------

ನನ್ನ ನಾಲಿಗೆ ಉದ್ದವಿಲ್ಲ, ಎಲ್ಲರಂತೆಯೇ ಇದೆ - ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ

ಅದು ನಾಲಗೆಯಲ್ಲ, ವಿಷದ ಹಾವು ಎನ್ನುವುದು ಜನರ ಭೀತಿ.

---------------------

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಎಲ್ಲ ಹಿಂದೂಗಳನ್ನು ಒಗ್ಗೂಡಿಸಿದರೆ ಅವರ ಹೆಸರಲ್ಲಿ ದೇವಸ್ಥಾನ ಕಟ್ಟಿಸುವೆ -ಆನಂದ ಅಸ್ನೋಟಿಕರ್, ಉ.ಕ.ಕ್ಷೇತ್ರದ ಮೈತ್ರಿ ಅಭ್ಯರ್ಥಿ

ಯಾವ ಮಸೀದಿಯನ್ನು ಒಡೆದು?
---------------------

ನನಗೆ ಬಿಜೆಪಿ ಸೆಟ್ಟಾಗುತ್ತಿಲ್ಲ -ಡಾ.ಉಮೇಶ್ ಜಾಧವ್, ಕಲಬುರಗಿ ಬಿಜೆಪಿ ಅಭ್ಯರ್ಥಿ
ಪ್ರಸ್ತದ ಹೊತ್ತಿನಲ್ಲಿ ವಧುವಿನ ಕುರಿತಂತೆ ದೂರು.

---------------------

ಮೋದಿ ಹೆಸರಲ್ಲಿ ಮತಯಾಚನೆ ದೇಶದ ಭವಿಷ್ಯಕ್ಕೆ ಒಳ್ಳೆಯದಲ್ಲ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ಬಹುಶಃ ಆರೆಸ್ಸೆಸ್‌ನ ಭವಿಷ್ಯದ ಬಗ್ಗೆ ಅವರು ಯೋಚಿಸುತ್ತಿರಬೇಕು.

---------------------

ಮೂಲತಃ ನಾನೊಬ್ಬಳು ನಟಿ - ಸ್ಮತಿ ಇರಾನಿ, ಕೇಂದ್ರ ಸಚಿವೆ

ಸಂಸತ್ತಿನಲ್ಲಿ ಚೆನ್ನಾಗಿಯೇ ನಟಿಸಿದ್ದೀರಿ ಬಿಡಿ.

---------------------

ಸಿನೆಮಾದವರು ಜನರ ಆಸ್ತಿ -ಯಶ್, ನಟ

ನಿಮ್ಮ ಆಸ್ತಿಯಲ್ಲಿ ಅವರು ಪಾಲು ಕೇಳಬಹುದೇ?

---------------------

ಉಗ್ರತ್ವ ಮಟ್ಟ ಹಾಕದಿದ್ದರೆ ವಿಶ್ವದ ಎಲ್ಲಾ ದೇಶಗಳೂ ಕಷ್ಟ ಅನುಭವಿಸಬೇಕಾಗುತ್ತದೆ - ವೆಂಕಯ್ಯನಾಯ್ಡು, ಉಪ ರಾಷ್ಟ್ರಪತಿ

ಅದಕ್ಕಾಗಿ ತಮ್ಮವರು ಪ್ರಜ್ಞಾಸಿಂಗ್ ಠಾಕೂರ್‌ಗೆ ಟಿಕೆಟ್ ಕೊಟ್ಟಿರಬೇಕು.

---------------------

ನಾನು ಉಪ ಮುಖ್ಯಮಂತ್ರಿ ಆಗಲ್ಲ, ಆಗುವುದಾದರೆ ಮುಖ್ಯಮಂತ್ರಿ -ಉಮೇಶ್ ಕತ್ತಿ, ಶಾಸಕ
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವ ಕನಸು ಇನ್ನೂ ಇದ್ದಂತಿದೆ.

---------------------

ಪ್ರಧಾನಿ ಹುದ್ದೆ ಹರಾಜಿಗಿಲ್ಲ - ನರೇಂದ್ರ ಮೋದಿ, ಪ್ರಧಾನಿ
ಆದರೆ ಅದರ ಘನತೆಯನ್ನು ಮಾತ್ರ ಹರಾಜಿಗಿಟ್ಟು ಬಿಟ್ಟಿರಿ.

---------------------

ಕಾಂಗ್ರೆಸ್‌ನವರ ಜಗಳದಲ್ಲಿ ನಾವಿಲ್ಲ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಸದ್ಯಕ್ಕೆ ನಿಮಗೆ ನಿಮ್ಮೆಳಗಿನ ಜಗಳವೇ ಹೆಚ್ಚಾಗಿ ಬಿಟ್ಟಂತಿದೆ.

---------------------

ಹೊಸ ಪಂಚಾಂಗದಂತೆ ಜೋತಿಷ್ಯ ಹೇಳುತ್ತ್ತಿದ್ದೇನೆ ಬಿಜೆಪಿಯವರಿಗೆ ಮೈತ್ರಿ ಸರಕಾರವನ್ನು ಅಲುಗಾಡಿಸಲೂ ಸಾಧ್ಯವಿಲ್ಲ - ಎಚ್.ಡಿ.ರೇವಣ್ಣ, ಸಚಿವ
  ಪಂಚಾಂಗ ಪ್ರಜಾಪ್ರಭುತ್ವದ ಎಷ್ಟನೆಯ ಅಂಗ?

---------------------

ನಮ್ಮ ದೇಶದಲ್ಲಿ ಯುವ ಜನರ ಬುದ್ಧಿವಂತಿಕೆಗೆ ತಕ್ಕ ಅವಕಾಶ ಸಿಗುತ್ತಿಲ್ಲ - ವಿಜಯಸಂಕೇಶ್ವರ, ಮಾಜಿ ಸಂಸದ
ನಿಮ್ಮಂತಹ ವೃದ್ಧರು ಅದಕ್ಕೆ ಅವಕಾಶ ನೀಡಬೇಕಲ್ಲ?

---------------------

ಶಾಸಕ ರಮೇಶ್ ಜಾರಕಿಹೊಳಿ ರಕ್ತ, ಡಿಎನ್‌ಎ ಕಾಂಗ್ರೆಸ್‌ನದ್ದು - ದಿನೇಶ್‌ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಹೌದು, ಆ ಕಾರಣದಿಂದಲೇ ಅವರು ಸಮಯಸಾಧಕರಂತೆ ವರ್ತಿಸುತ್ತಿದ್ದಾರೆ.

---------------------

ಬಿಜೆಪಿ ಎಂದಿಗೂ ಭಯೋತ್ಪದಕರ ಜೊತೆ ಇಲು - ಇಲು ( ಐ ಲವ್ ಯೂ) ಮಾಡುವುದಿಲ್ಲ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಮತ್ತೇಕೆ ಕಾಶ್ಮೀರದಲ್ಲಿ ಪಿಡಿಪಿ ಜೊತೆಗೆ ಇಲು ಇಲು ಮಾಡಿದ್ದು?

---------------------

ಹಸಿರು ಧ್ವಜ ಕಂಡರೆ ಪಾಕಿಸ್ತಾನ ನೆನಪಾಗುತ್ತದೆ - ಗಿರಿರಾಜ್‌ಸಿಂಗ್, ಕೇಂದ್ರ ಸಚಿವ
ಚುನಾವಣೆ ಪ್ರಚಾರದಲ್ಲಿ ಅದೊಂದು ಧ್ವಜ ಹಾರಿಸುವುದಷ್ಟೇ ಬಾಕಿಯಿತ್ತು.

---------------------

ಅಮೃತಕ್ಕಾಗಿ ಎಲ್ಲ ದೇವತೆಗಳು ಒಂದಾದಂತೆ ಹಿಂದೂ ಧರ್ಮದ ರಕ್ಷಣೆಗೆ ಎಲ್ಲರೂ ಒಂದುಗೂಡಬೇಕು - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಕಡೆದವರಿಗೆ ಜಾತೀಯತೆಯ ವಿಷಯ ಮಾತ್ರ ಸಿಕ್ಕಿತಂತೆ.

--------------------

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಪ್ರತಿ ಪಕ್ಷಗಳೆಲ್ಲ ಒಂದಾಗಲಿದೆ - ವೀರಪ್ಪಮೊಯ್ಲಿ, ಕಾಂಗ್ರೆಸ್ ನಾಯಕ

ಚುನಾವಣೆಯ ಮೊದಲು ಒಂದಾಗಿದ್ದರೆ ಏನಾದರೂ ಒಂದಿಷ್ಟು ಲಾಭವಿತ್ತು.

---------------------

ಮೋದಿ ಮತ್ತೆ ಪ್ರಧಾನಿಯಾದರೆ ಅದಕ್ಕೆ ರಾಹುಲ್‌ ಗಾಂಧಿ ನೇರ ಹೊಣೆಗಾರ - ಅರವಿಂದ್‌ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
ಪ್ರಧಾನಿಯಾಗದಿದ್ದರೆ ಅದಕ್ಕೆ ನೀವು ಹೊಣೆಗಾರರೇ?

---------------------
ರಾಜಕಾರಣದಲ್ಲಿ ಯಾರೂ ಅಸ್ಪಶ್ಯರಲ್ಲ - ಕಮಲ್‌ಹಾಸನ್, ನಟ
  ಬಿಜೆಪಿಯೊಳಗಿನ ಮೋಹ ತುಂಬಿ ತುಳುಕುತ್ತಿರುವಂತಿದೆ.
---------------------

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...