ತುಮಕೂರು: ವಾಹನ ಚಲಾಯಿಸುವ ವೇಳೆ ಹೃದಯಾಘಾತದಿಂದ ತಂದೆ ಮೃತ್ಯು; ಅಪಘಾತ ತಪ್ಪಿಸಿದ ಪುತ್ರ

Update: 2019-05-01 12:38 GMT

ತುಮಕೂರು: ವಾಹನ ಚಾಲಾಯಿಸುವ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರಿನಲ್ಲಿ ನಡೆದಿದೆ.

ಮೃತರನ್ನು ಶಿವಕುಮಾರ್ (35) ಎಂದು ಗುರುತಿಸಲಾಗಿದೆ.

ಟಾಟ ಏಸ್ ವಾಹನ ಓಡಿಸುತ್ತಿದ್ದ ವೇಳೆ ಅವರಿಗೆ ಹೃದಯಾಘಾತವಾಗಿದ್ದು, ಈ ವೇಳೆ ವಾಹನದಲ್ಲಿದ್ದ 8 ವರ್ಷದ ಅವರ ಪುತ್ರ ಸ್ಟೇರಿಂಗ್ ಅನ್ನು ರಸ್ತೆ ಪಕ್ಕದ ದಿಣ್ಣೆಯ ಕಡೆಗೆ ತಿರುಗಿಸಿ ಅಪಾಯ ತಪ್ಪಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News